ಮಾಡಗ್ಯಾಳರ ಸೈಕಲ್ ಯಾತ್ರೆಗೆ ಭವ್ಯ ಸ್ವಾಗತ
ಲೋಕದರ್ಶನ ವರದಿ
ಗದಗ 22 ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ಭೀಮಾಶಂಕರ. ಎಸ್. ಮಾಡಗ್ಯಾಳ ಅವರ ಸೈಕಲ್ ಯಾತ್ರೆಗೆ ಗದಗ ನಗರದ ಸಿಪಿಐ ದೌಲತ್ ಕುರಿ ಅವರು ಭೀಮಾಶಂಕರ ಅವರಿಗೆ ಹೂವಿನಮಾಲೆ ಹಾಕಿ ಭವ್ಯ ಸ್ವಾಗತ ನೀಡಿದರು.
ಶಹರ ಪೋಲೀಸ್ ಠಾಣೆ ಪಿಎಸ್ಐ ಸಂಗಮೇಶ ಪಾಲಭಾವಿ. ಅವರು ಮಲಾರ್ಪಣೆ ಮಾಡಿದರು ಗದಗ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಮಲ್ಲಿಕಾಜರ್ುನ ಕುಲಕಣರ್ಿ ಯವರು ಸ್ವಾಗತಿಸಿದರು ಬೇಟಗೇರಿ ಪೋಲಿಸ್ ಠಾಣೆ ಪಿಎಸ್ಐ ಶಿವಕುಮಾರ. ಬಿ. ಮುಚ್ಚಂಡಿ ಯವರು ಸ್ವಾಗತಿಸಿದರು ಇದೆ ಸಂದರ್ಭದಲ್ಲಿ ಪೋಲಿಸ್ ಸಿಬ್ಬಂಧಿ ಭಾಗಿಯಾಗಿದ್ದರು ಸ್ವಾಗತಿಸಿ ಸನ್ಮಾನಿಸಿ ಬಿಳ್ಕೋಟ್ಟರು.
ಮೂಲತ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ಭೀಮಾಶಂಕರ. ಎಸ್. ಮಾಡಗ್ಯಾಳ. ಅವರು ವಿಜಯಪುರ ಜಿಲ್ಲಾ ಶಸತ್ತ್ರ ಮೀಸಲು ಪಡೆಯಲ್ಲಿ ಸೇರ್ಪಡೆಯಾಗಿ ಸದ್ಯ ಕಾರ್ಕಳದ ನಕ್ಸಲ ನಿಗ್ರಹ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಭಾರತ ದರ್ಶನ ಉದ್ದೇಶ ಹುತಾತ್ಮ ಯೋಧರಿಗೆ ಭಾರತ ಯೋಧ ಎಂಬ ವೆಬ್ಸೈಟ್ನಲ್ಲಿ ಪ್ರಚಾರಾರ್ಥ ಸೈಕಲ್ ಮೇಲೆ ಸಂಚರಿಸಿ ತಿಳುವಳಿಕೆ ನೀಡುವ ಯೋಜನೆಯು ಭಾರತ ಸರಕಾರ ಹಾಗೂ ಚಿತ್ರನಟ ಅಕ್ಷಯಕುಮಾರ ಇದಕ್ಕೆ ಚಾಲನೆ ನೀಡಿದ್ದು ಇದಕ್ಕೆ ಸಾರ್ವಜನಿಕರಿಂದ ಸಹಕಾರ ಬೆಂಬಲ ಸಿಗಲೆಂಬುದೆ ಭಾರತ ದರ್ಶನದ ಮುಖ್ಯ ಉದ್ದೇಶ ಎನ್ನುತ್ತಾರೆ.
ಭೀಮಾಶಂಕರ ಅವರು ಇದಕ್ಕೆ ಐಪಿಎಸ್ ಅಧಿಕಾರಿ ಲಕ್ಷ್ಮೀಪ್ರಸಾದ ಅವರಿಂದ 120 ದಿನಗಳ ರಜೆ ಪಡೆದುಕೊಂಡು ಸಂಚಾರ ಪ್ರಾರಂಭಿಸಿದ್ದಾರೆ. ನಕ್ಸಲ್ ನಿಗ್ರಹ ಪಡೆ ಸಹಕಾರ ಪ್ರತಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸ್ವಾಗತ ಪಡೆದುಕೊಂಡು ಒಳ್ಳೆಯ ಉತ್ಸಾಹದಿಂದ ಸಂಚರಿಸುತ್ತಿದ್ದಾರೆ ಕೆಎಸ್ಆರ್ ಪಿ. ಎಡಿಜಿಪಿ ಬಾಸ್ಕರ್ರಾವ್ ಅವರಿಂದ ಪ್ರತಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿರುತ್ತಾರೆ. ಸೆ. 5ರಂದು ದೆಹಲಿಯಿಂದ ಪ್ರಾರಂಭವಾದ ಯಾತ್ರೆ 120 ದಿನಗಳ ಕಾಲ 20ರಾಜ್ಯಗಳ ರಾಜಧಾನಿಯನ್ನು ಸಂಪಕರ್ಿಸಿ ನಂತರ ಕನ್ಯಾಕುಮಾರಿಗೆ ಅಂತ್ಯಗೊಳ್ಳಲಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 