ಎಪಿಎಂಸಿ ಚಿಕ್ಕ ಮಳಿಗೆಗಳ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ
MLA Sidhu Savadi launches construction of APMC small shops
ಎಪಿಎಂಸಿ ಚಿಕ್ಕ ಮಳಿಗೆಗಳ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಚಾಲನೆ
ಮಹಾಲಿಂಗಪುರ 26 : ಕೃಷಿ ಮಾರುಕಟ್ಟೆ ಸಮಿತಿಗೆ ಆದಾಯ ಹೆಚ್ಚಳ ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಜತ್ತ ಜಾಂಬೋಟಿ ಹೆದ್ದಾರಿ ಪಕ್ಕದ ಎಪಿಎಂಸಿ ಜಾಗೆಯಲ್ಲಿ ಚಿಕ್ಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು. ಎಪಿಎಂಸಿ ಜಾಗೆಯಲ್ಲಿ ಸನ್ 2023-24 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಸುಮಾರು 79 ಲಕ್ಷಗಳ ಮೊತ್ತದಲ್ಲಿ 11 ಚಿಕ್ಕ ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಬುಧವಾರ ಮುಂಜಾನೆ ಗುದ್ದಲಿ ಪೂಜೆಯೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಒಟ್ಟು 5.5 ತಿಂಗಳಲ್ಲಿ ಉತ್ತಮ ಗುಣಮಟ್ಟ ಹೊಂದಿರುವ ಮಳಿಗೆಗಳನ್ನು ನಿರ್ಮಿಸಬೇಕೆಂದು ಗುತ್ತಿಗೆದಾರರಿಗೆ ತಿಳಿಸಿದರು.
ಈ ಶಂಕುಸ್ಥಾಪನೆ ಸಮಯದಲ್ಲಿ ಭಾಜಪ ಮುಖಂಡರಾದ ಮಹಾಂತೇಶ ಹಿಟ್ಟಿನಮಠ ಮಹಾಲಿಂಗಪ್ಪ ಕುಳ್ಳೋಳ್ಳಿ ಸುರೇಶ್ ಅಕ್ಕಿವಾಟ ಈರ್ಪ ದಿನ್ನಿಮನಿ ಮನೋಹರ ಶಿರೋಳ ಜಿ ಎಸ್ ಗೊಂಬಿ ಚನಬಸು ಯರಗಟ್ಟಿ ಶಿವಾನಂದ ಅಂಗಡಿ ಶಂಕರಗೌಡ ಪಾಟೀಲ ಚೆನ್ನಪ್ಪ ಪಟ್ಟಣಶೆಟ್ಟಿ ವಿರೇಶ ಮುಂಡಗನೂರ ಶ್ರೀಶೈಲ ನುಚ್ಚಿ ಬಾಳು ಮಾಳವದೆ ಮಹಾಲಿಂಗಪ್ಪ ಕಂಠಿ ಮಹೇಶ್ ಜಿಡ್ಡಿಮನಿ ಹರೀಶ ನಾಯಕ ಚಂದ್ರಶೇಖರ ಗೊಂದಿ ವಿ ಡಿ ಮುಗಳ್ಯಾಳ ಸಂಗಪ್ಪ ಲೋಣಿ ಶೇಖರ ಮಗದುಮ ಗುರು ಜಂಬಗಿ ಬಸವರಾಜ ಮಡಿವಾಳ ಅಜಯ ಹಂದ್ರಾಳ ಬಸು ಹುಕ್ಕೇರಿ ಮಹೇಶ್ ಮುಕುಂದ ರವಿ ಗಿರಿಸಾಗರ ಎಪಿಎಂಸಿ ಕಾರ್ಯದರ್ಶಿ ಎಲ್ ಎಂ. ಉದ್ದಪ್ಪನ್ನವರ ಸ.ಕಾರ್ಯದರ್ಶಿಗಳಾದ ಬಿ ಪಿ.ಬಾಡಗಿ ಡಿ ಬಿ ಬಸಗೌಡರ, ಆಂತರೀಕ ಲೆಕ್ಕ ಪರಿಶೋಧಕರು ಆರ್ ಎಚ್. ರಾಠೋಡ್ ಪ್ರದಸ ಎ ಎಲ್. ಕಾಂಬಳೆ ಮಾರುಕಟ್ಟೆ ಮೇಲ್ವಿಚಾರಕ ಬಿ ಎನ್. ಕುಂಬಾರ ಮತ್ತು ಕುಡಚಿ ಕೃಷಿ ಮಾರುಕಟ್ಟೆ ಕಾರ್ಯದರ್ಶಿ ಆರ್ ಎಚ್ ಭೋಜನ್ನವರ ಮುಂತಾದವರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 