ಚೌಡಯ್ಯ ಸಮಾಜದಿಂದ ಶಾಸಕ ನಾಡಗೌಡರಿಗೆ ಸನ್ಮಾನ

ಚೌಡಯ್ಯ ಸಮಾಜದಿಂದ ಶಾಸಕ ನಾಡಗೌಡರಿಗೆ ಸನ್ಮಾನ MLA Nadagowda honored by Chowdayya Samaj

 

ತಾಳಿಕೋಟಿ  18: ಪಟ್ಟಣದಲ್ಲಿ ಜರುಗಿದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ ಪ್ರತಿಮೆ ಅನಾವರಣ, ನೂತನ ಸಭಾಭವನ ಉದ್ಘಾಟನೆ ಹಾಗೂ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಅನುಭವ ಮಂಟಪ ಶಂಕುಸ್ಥಾಪನೆ ಅಂಗವಾಗಿ ಹಮ್ಮಿಕೊಂಡ ಧರ್ಮಸಭೆಯಲ್ಲಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಹಾಗೂ ಮುದ್ದೇಬಿಹಾಳ ಶಾಸಕರಾದ ಸಿ.ಎಸ್‌. ನಾರಡಗೌಡ(ಅಪ್ಪಾಜಿ) ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಮಾಜಿ ಶಾಸಕ ಶರಣಪ್ಪ ಸುಣಗಾರ,ಮೋಹನಕುಮಾರ ಬೆಂಗಳೂರ, ಪ್ರಭುಗೌಡ ಮದರಕಲ್ಲ, ಶಿವಕುಮಾರ ನಾಟೀಕಾರ, ಶಿವಾಜಿ ಮೆಟಗಾರ, ಅಮರೇಶಣ್ಣ ಕಾಮನಕೇರಿ, ಅಂಬಿಗರ ಚೌಡಯ್ಯ ಸಮಾಜದ ತಾಲೂಕ ಅಧ್ಯಕ್ಷ ಪರಶುರಾಮ ತಂಗಡಗಿ, ನ್ಯಾಯವಾದಿ ಎಂ.ಎಸ್‌.ಜೋಲಿ, ಶಶಿಕಾಂತ ಮೂಕಿಹಾಳ,ರಮೇಶ ಮೂಕಿಹಾಳ ಹಾಗೂ ಗಣ್ಯರು ಹಿರಿಯರು ಉಪಸ್ಥಿತರಿದ್ದರು.