ಕುರುಗೋಡು: ನಿಧಿಗಳ್ಳರ ದಾಳಿಗೆ ತುತ್ತಾಗಿ ದೇವಸ್ಥಾನ ಶಿಥಿಲ
ಲೋಕದರ್ಶನ ವರದಿ
ಕುರುಗೋಡು 16: ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ ಐತಿಹಾಸಿಕ ಸುಪ್ರಸಿದ್ದ ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ ನಿದಿಗಳ್ಳರ ದಾಳಿಗೆ ತುತ್ತಾಗಿ ದೇವರ ಮೂತರ್ಿ ಮುಕ್ಕಾಗಿತ್ತು ಮತ್ತು ದೇವಸ್ಥಾನದ ಕಟ್ಟಡ ಸಂಪೂರ್ಣ ಶಿಥಿಲಾವ್ಯಸ್ಥೆಗೊಂಡಿದ್ದರಿಂದ ಮರುನಿಮರ್ಾಣ ಪ್ರಕ್ರಿಯೆ ಪ್ರಾರಂಭಗೊಂಡು ಮಂಗಳವಾರ ಗುರು ಪೂರ್ಣಮೆಯ ದಿನದಂದು ಗರ್ಭಗುಡಿಯ ಬಾಗಿಲು ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದಶರ್ಿಗಳಾದ ಕೆಎಂ.ರುದ್ರಮುನಿಸ್ವಾಮಿ ಮಾತನಾಡಿ, ಈ ದೇವಸ್ಥಾನವು ಕುರುಗೋಡಿನ ರಾಜರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿತ್ತು. ದೇಶದಲ್ಲಿ ಎಲ್ಲಿಯೂ ಇಲ್ಲದ ಪಂಚಮುಖ ವೀರಭದ್ರ ದೇವರ ಮೂರ್ತಿ ಇಲ್ಲಿ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. ಇಂದಿಗೂ ಕುರುಗೋಡಿನ ಸಾರ್ವಜನಿಕರು ಶ್ರಾವಣಮಾಸದಲ್ಲಿ ಐದೂ ಸೋಮವಾರಗಳು ಬಂದರೆ ಮೊದಲನೆಯ ಸೋಮವಾರ ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ದಾರ್ಮಾಕ ದತ್ತಿ ಇಲಾಕೆಯ ಸಹಾಯದಲ್ಲಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತದೆ ಎಂದರು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಎನ್.ಮರೇಗೌಡ ಮಾತನಾಡಿ, ಕುರುಗೋಡು ಐತಿಹಾಸಿಕ ಸುಪ್ರಸಿದ್ದ ಸ್ಥಳವಾಗಿದ್ದು, ಇಲ್ಲಿ ಅನೇಕ ವೀರಗಲ್ಲು, ಶಾಸನಗಳು, ಪುರಾತನ ಕಾಲದ ದೇವಸ್ಥಾನಗಳಿವೆ. ಈ ಪ್ರದೇಶವನ್ನು ಸಂಶೋಧನೆಗೆ ಒಳಪಡಿಸಿ ನಂತರ ಪ್ರವಾಸೋದ್ಯಮ ಇಲಾಖೆ ಸೇರಿಸಬೇಕು ಹಾಗೂ ಇಲ್ಲಿನ ಐತಿಹಾಸಿಕ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಅವಶ್ಯಕತೆವಿದೆ. ಪಂಚಮುಖಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಾಸ್ಕರ್ ರಾವ್, ದಾನಯ್ಯಸ್ವಾಮಿ, ಹೂಗಾರ ಯೋಗೀಶ್, ಕೆಎಂ.ಲೋಕೇಶ್ಸ್ವಾಮಿ, ಹೊನ್ನುರಸ್ವಾಮಿ, ಕಗ್ಗಲ್ ಸಿದ್ದಪ್ಪ, ಎರ್ರಿಸ್ವಾಮಿ ಹಾಗೂ ಇನ್ನಿತರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 