ಕುರುಗೋಡು: ನಿಧಿಗಳ್ಳರ ದಾಳಿಗೆ ತುತ್ತಾಗಿ ದೇವಸ್ಥಾನ ಶಿಥಿಲ
ಲೋಕದರ್ಶನ ವರದಿ
ಕುರುಗೋಡು 16: ಪಟ್ಟಣದ ಮುಷ್ಟಗಟ್ಟೆ ರಸ್ತೆಯಲ್ಲಿನ ಐತಿಹಾಸಿಕ ಸುಪ್ರಸಿದ್ದ ಪಂಚಮುಖಿ ವೀರಭದ್ರೇಶ್ವರ ದೇವಸ್ಥಾನ ನಿದಿಗಳ್ಳರ ದಾಳಿಗೆ ತುತ್ತಾಗಿ ದೇವರ ಮೂತರ್ಿ ಮುಕ್ಕಾಗಿತ್ತು ಮತ್ತು ದೇವಸ್ಥಾನದ ಕಟ್ಟಡ ಸಂಪೂರ್ಣ ಶಿಥಿಲಾವ್ಯಸ್ಥೆಗೊಂಡಿದ್ದರಿಂದ ಮರುನಿಮರ್ಾಣ ಪ್ರಕ್ರಿಯೆ ಪ್ರಾರಂಭಗೊಂಡು ಮಂಗಳವಾರ ಗುರು ಪೂರ್ಣಮೆಯ ದಿನದಂದು ಗರ್ಭಗುಡಿಯ ಬಾಗಿಲು ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದಶರ್ಿಗಳಾದ ಕೆಎಂ.ರುದ್ರಮುನಿಸ್ವಾಮಿ ಮಾತನಾಡಿ, ಈ ದೇವಸ್ಥಾನವು ಕುರುಗೋಡಿನ ರಾಜರ ಆಡಳಿತ ಕಾಲದಲ್ಲಿ ನಿರ್ಮಾಣವಾಗಿತ್ತು. ದೇಶದಲ್ಲಿ ಎಲ್ಲಿಯೂ ಇಲ್ಲದ ಪಂಚಮುಖ ವೀರಭದ್ರ ದೇವರ ಮೂರ್ತಿ ಇಲ್ಲಿ ನಿರ್ಮಾಣಗೊಂಡಿರುವುದು ವಿಶೇಷವಾಗಿದೆ. ಇಂದಿಗೂ ಕುರುಗೋಡಿನ ಸಾರ್ವಜನಿಕರು ಶ್ರಾವಣಮಾಸದಲ್ಲಿ ಐದೂ ಸೋಮವಾರಗಳು ಬಂದರೆ ಮೊದಲನೆಯ ಸೋಮವಾರ ಈ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸುತ್ತಾರೆ. ದಾರ್ಮಾಕ ದತ್ತಿ ಇಲಾಕೆಯ ಸಹಾಯದಲ್ಲಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತದೆ ಎಂದರು.
ನಿವೃತ್ತ ಆರೋಗ್ಯ ಇಲಾಖೆ ಅಧಿಕಾರಿ ಎನ್.ಮರೇಗೌಡ ಮಾತನಾಡಿ, ಕುರುಗೋಡು ಐತಿಹಾಸಿಕ ಸುಪ್ರಸಿದ್ದ ಸ್ಥಳವಾಗಿದ್ದು, ಇಲ್ಲಿ ಅನೇಕ ವೀರಗಲ್ಲು, ಶಾಸನಗಳು, ಪುರಾತನ ಕಾಲದ ದೇವಸ್ಥಾನಗಳಿವೆ. ಈ ಪ್ರದೇಶವನ್ನು ಸಂಶೋಧನೆಗೆ ಒಳಪಡಿಸಿ ನಂತರ ಪ್ರವಾಸೋದ್ಯಮ ಇಲಾಖೆ ಸೇರಿಸಬೇಕು ಹಾಗೂ ಇಲ್ಲಿನ ಐತಿಹಾಸಿಕ ಸ್ಮಾರಕಗಳಿಗೆ ಸೂಕ್ತ ರಕ್ಷಣೆ ಒದಗಿಸುವ ಅವಶ್ಯಕತೆವಿದೆ. ಪಂಚಮುಖಿ ದೇವಸ್ಥಾನ ಮರು ನಿರ್ಮಾಣಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಬಾಸ್ಕರ್ ರಾವ್, ದಾನಯ್ಯಸ್ವಾಮಿ, ಹೂಗಾರ ಯೋಗೀಶ್, ಕೆಎಂ.ಲೋಕೇಶ್ಸ್ವಾಮಿ, ಹೊನ್ನುರಸ್ವಾಮಿ, ಕಗ್ಗಲ್ ಸಿದ್ದಪ್ಪ, ಎರ್ರಿಸ್ವಾಮಿ ಹಾಗೂ ಇನ್ನಿತರರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 