ಮಕ್ಕಳು ಶೋಷಣೆಗೊಳಗಾಗದಂತೆ ಕಾನೂನಿನ ಅರಿವು ಮೂಡಿಸುವದು ಅಗತ್ಯ : ಜೋಶಿ
ಲೋಕದರ್ಶನ ವರದಿ
ಯಲ್ಲಾಪುರ,15: ಕಾನೂನಿನ ಕುರಿತು ಇರುವ ಭಯವನ್ನು ಹೋಗಲಾಡಿಸಿ, ಮಕ್ಕಳು ಶೋಷಣೆಗೊಳಗಾಗದಂತೆ ಅವರಲ್ಲಿ ಕಾನೂನಿನ ಅರಿವು ಮೂಡಿಸುವದು ಇಂದು ಅಗತ್ಯವಾಗಿದೆ. ಎಂದು ಹಿರಿಯ ನ್ಯಾಯಾಧೀಶ ವಿ.ವಿ ಜೋಶಿ ಹೇಳಿದರು.ಅವರು ಬುಧವಾರ ಸಂಜೆ ಪಟ್ಟಣದ ಸಬಗೇರಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಶ್ರಾಯದಲ್ಲಿ ಮಕ್ಕಳ ದಿನಾಚಾರಣೆ ನಿಮಿತ್ತ ಹಮ್ಮಿಕೊಂಡಿದ್ದ ಬಾಲಾಪರಾಧವಿರೋಧಿ ಕಾಯ್ದೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಮಾತನಾಡಿ ನಾವು ಬೇರೆಯವರಿಗೆ ಮೋಸ ಮಾಡಬಾರದು ಹಾಗೂ ನಾವು ಸಮಸ್ಯೆಯ ಸುಳಿಗೆ ಸಿಗದಂತೆ ನೆಮ್ಮದಿಯ ಜೀವನಕ್ಕೆ ಪ್ರತಿಯೊಬ್ಬರಿಗೂ ಕಾನೂನಿನ ತಿಳುವಳಿಕೆ ಅವಶ್ಯವಾಗಿ ಪಡೆಯಬೇಕು.ವಿದ್ಯಾಥರ್ಿದೆಸೆಯಿಂದಲೆ ಶೋಷಣೆಯನ್ನು ಪ್ರತಿಭಟಿಸುವ ಮನೋಭಾವನೆ ಬೆಳೆಸಲು ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಮೂಲಕ ಮಕ್ಕಳಲ್ಲಿ ಕಾನೂನಿನ ಕುರಿತ ತಿಳುವಳಿಕೆ ನೀಡಲಾಗುತ್ತಿದೆ. ಮಕ್ಕಳು ತಮ್ಮ ಸುತ್ತ ಮುತ್ತ ಯಾರೇ ಶೋಷಣೆಗೊಳಗಾಗುತ್ತಿರುವದು ತಮ್ಮ ಗಮನಕ್ಕೆ ಬಂದ ಕೂಡಲೇ ಹಿಂಜರಿಯದೇ ಶಿಕ್ಷಕರ,ಪಾಲಕರ ಅಥವಾ ಹಿರಿಯರ ಗಮನಕ್ಕೆ ತಂದು ಕಾನೂನಿನ ನೆರವು ಕೊಡಿಸುವಲ್ಲಿ ಮುಂದಾಗಬೇಕು ಎಂದರು. ಹಿರಿಯ ವಕೀಲ ಎನ್.ಟಿ ಗಾಂವ್ಕರ್ ಉಪನ್ಯಾಸ ನೀಡಿ ಬಾಲಾಪರಾಧವಿರೋಧಿ ಕಾಯ್ದೆ ಕುರಿತು ವಿವರವಾದ ಮಾಹಿತಿ ನೀಡಿದರು. ವಕೀಲರ ಸಂಘದ ಅಧ್ಯಕ್ಷ ಟಿ.ಜಿ ಕೋಮಾರ ಮಾತನಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ಶಂಕರಮ್ಮಾ ಬೋವಿ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಪಕಿ ಶಾಲಿನಿ ಪಾಲೇಕರ್ ಸ್ವಾಗತಿಸಿದರು. ಶಿಕ್ಷಕಿಯರಾದ ಭಾರತಿ ನಾಯಕ ನಿರ್ವಹಿಸಿದರು. ಸರಸ್ವತಿ ಭಟ್ಟ ವಂದಿಸಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 