ಲಿಂಗರಾಜಗೆ ‘ಇನ್ಫೋಸಿಸ್ ರೈಸ್ ಪ್ರಶಸ್ತಿ
Infosys Rice Award to Lingaraj
ಲಿಂಗರಾಜಗೆ ‘ಇನ್ಫೋಸಿಸ್ ರೈಸ್ ಪ್ರಶಸ್ತಿ’
ಧಾರವಾಡ 05 : ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಸಂಸ್ಥೆಯಾಗಿರುವ ‘ಇನ್ಫೋಸಿಸ್’ ಹುಬ್ಬಳ್ಳಿ ಘಟಕದಲ್ಲಿ ಕಳೆದ 3 ವರ್ಷ 6 ತಿಂಗಳಿಂದ ಸೇವೆಸಲ್ಲಿಸುತ್ತಿರುವ ಲಿಂಗರಾಜ ವೀರಭದ್ರಯ್ಯ ಮಂಟೂರಮಠ ಅವರಿಗೆ ನಿರ್ದಿಷ್ಟ ಯೋಜನಾ ತಂಡದಿಂದ ಕೊಡಮಾಡುವ ‘ಇನ್ಫೋಸಿಸ್ ರೈಸ್ ಪ್ರಶಸ್ತಿ’ ಲಭಿಸಿದೆ.
ಲಿಂಗರಾಜ ಅವರು ‘ಇನ್ಫೋಸಿಸ್’ ಹುಬ್ಬಳ್ಳಿ ಘಟಕದ ಡಿಸಿಟಲ್ ಅನುಭವ ಘಟಕ(ಡಿಸಿಟಲ್ ಎಕ್ಸ್ಪೀರಿಯನ್ಸ್ ಯುನಿಟ್)ದಲ್ಲಿ ಕೆಲಸ ಮಾಡುತ್ತಿದ್ದು, ಇವರು ತಮ್ಮ ಕೆಲಸದಲ್ಲಿ ತೋರಿದ ಅಸಾಧಾರಣ ಕಾರ್ಯಕ್ಷಮತೆಯನ್ನು ವಿಶೇಷವಾಗಿ ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇತ್ತೀಚೆಗೆ ಮೈಸೂರು ‘ಇನ್ಫೋಸಿಸ್’ ಘಟಕದಲ್ಲಿ ಜರುಗಿದ ಸಮಾರಂಭದಲ್ಲಿ ಡೆಲಿವರಿ ಮ್ಯಾನೇಜರ್ ಸತೀಶ್ ಸಿಂದಿರಿ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನೋರ್ವ ಡೆಲಿವರಿ ಮ್ಯಾನೇಜರ್ ಮೆಹಬೂಬ್ಬಾಷಾ ಪಲಗಿರಿ ಇದ್ದರು. ನಗರದ ಮದಿಹಾಳ ಸಿಂಧೆ ಪ್ಲಾಟ್ ನಿವಾಸಿಯಾಗಿರುವ ಲಿಂಗರಾಜ ಅವರು ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಾಧ್ಯಾಪಕ ವ್ಹಿ. ಎನ್. ಮಂಟೂರಮಠ ಅವರ ಸುಪುತ್ರ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 