ಕುರಾನಿನ ಶ್ಲೋಕಗಳ ಕಲಾಕೃತಿಗಳ ಉದ್ಘಾಟನೆ
ಲೋಕದರ್ಶನ ವರದಿ
ಗದಗ 02: ಸ್ಥಳೀಯ ರಾಜೀವಗಾಂಧಿನಗರ ನಿವಾಸಿ ಹಾಗು ಚಿತ್ರ ಕಲಾವಿದ ಜನಾಬ ನಜೀರಅಹ್ಮದ ಎನ್ ಡಂಬಳ ಇವರಿಂದ ಕಲಾಕೃತಿಗಳ ಉದ್ಘಾಟನೆಯನ್ನು ಶಬೇಖದರ್ ಅಂಗವಾಗಿ ದಿ. 01ರಂದು ರಾತ್ರಿ ಮಜೀದೆ ರಝಾ ಆವರಣದಲ್ಲಿ ಹಾಪೀಜ್ ಮಹಮ್ಮದ ಅಂಜರಹುಸೇನ ಇವರಿಂದ ಉದ್ಘಾಟನೆ ಜರುಗಿತು.
ಈ ಸಂಧರ್ಭದಲ್ಲಿ ಇಂದಿನ ದಿನಗಳಲ್ಲಿ ವಿವಿಧ ಕಲಾಕೃತಿಗಳನ್ನು ಪ್ರರ್ದಶನ ಮಾಡುತ್ತಾರೆ. ಆದರೆ ಇಸ್ಲಾಂ ಬಗ್ಗೆ ಯಾವುದೇ ಕುರಾನಿನ ಕಲಾಕೃತಿಗಳನ್ನು ಪ್ರರ್ದಶನ ಮಾಡುವುದಿಲ್ಲ ಇಂದು ಕುರಾನಿನ ಕಲಾಕೃತಿಗಳನ್ನು ಒಳ್ಳೆಯ ರೀತಿಯಲ್ಲಿ ರಚನೆ ಮಾಡಿ ಎಲ್ಲಾ ಸಮಾಜ ಬಾಂಧವರಿಗೆ ಕೃತಿಗಳ ಮೂಲಕ ಸಂದೇಶ ಪ್ರಸಾರ ಮಾಡಿದ ಜನಾಬ ನಜೀರಅಹಮ್ಮದ ಡಂಬಳ ಇವರ ಕಾರ್ಯ ತುಂಬಾ ಮನಮುಟ್ಟವಂತವಾಗಿದೆ. ಎಂದು ಜನಾಬ ಅಬ್ದುಲ್ಜಬ್ಬಾರ ಖವಾಸ ಇವರು ತಮ್ಮ ವಿಚಾರ ಪ್ರಕಟಿಸಿದರು. ಈ ಪ್ರದರ್ಶನವು 01ರಿಂದ ರಂಜಾನ ಹಬ್ಬದ ವರೆಗೆ ನಡೆಯುತ್ತದೆ. ಎಲ್ಲಾ ಬಾಂಧವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜನಾಬ ಹಾಜಿ ನಬಿಸಾಬ ಜೆ ಡಂಬಳ, ಮಜ್ಜೀದೆ ರಝಾ ಚೇರಮನ್, ಮಹಬೂಬಸಾಬ ಜಿ ಡಂಬಳ, ಜನಾಬ ಡಾ. ಮಸೂತಿಮನಿ, ಜನಾಬ ಶಮುಶುದ್ದೀನ ಖಾಜಿ, ಜನಾಬ ಆಲಮ್ಸಾಬ, ಜನಾಬ ಮೆಹಬೂಬಸಾಬ ಹಣಗಿ, ಜನಾಬ ಮುನಿರ ಮಕಾಂದಾರ, ಶೌಕತ್ ಕಳಸಾಪೂರ, ಅನ್ವರ ಎ ಡಂಬಳ, ಮೌಲಾ ಕಟ್ಟಿಮನಿ ಹಾಗೂ ರಾಜುಗಾಂಧಿನಗರದ ಗಣ್ಯರು ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 