ಸಂಜೆ 5 ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ... ಶಬರಿಮಲೆಯಲ್ಲಿ ಪೊಲೀಸ್ ಸರ್ಪಗಾವಲು
ನಿಲಾಕಲ್ 17: ಶಬರಿಮಲೆಯಲ್ಲಿ ಸದ್ಯದ
ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಾತಾಗಿದೆ. ಒಂದೆಡೆ ಸುಪ್ರೀಂಕೋರ್ಟ್ ಬ್ರಹ್ಮಾಸ್ತ್ರ ಹಿಡಿದು
ಅಯ್ಯಪ್ಪನ ದೇಗುಲ ಪ್ರವೇಶಿಸುವ ತವಕದಲ್ಲಿ ಮಹಿಳಾ ಭಕ್ತರಿದ್ದರೆ, ಮತ್ತೊಂದೆಡೆ ಶತಮಾನಗಳ
ಪದ್ಧತಿಯನ್ನು ಮುರಿಯಲು ಬಿಡೆವು ಎಂದು ಮತ್ತೊಂದು ಭಕ್ತರ ಗುಂಪು ಸನ್ನದ್ಧವಾಗಿ ನಿಂತಿವೆ.
ಪರಿಸ್ಥಿತಿ
ಸೂಕ್ಷ್ಮತೆ ಅರಿತಿರುವ ಕೇರಳ ಸರ್ಕಾರ ದೇಗುಲದಿಂದ ಸುಮಾರು 20 ಕಿ.ಮೀ ದೂರದವರೆಗೂ ಪೊಲೀಸ್ ಸರ್ಪಗಾವಲನ್ನು
ಏರ್ಪಡಿಸಿದೆ. 1000 ಭದ್ರತಾ ಸಿಬ್ಬಂದಿ, 800 ಪುರುಷ ಹಾಗೂ 200 ಮಹಿಳಾ ಪೊಲೀಸರನ್ನು ಸ್ಥಳದಲ್ಲಿ
ನಿಯೋಜಿಸಲಾಗಿದೆ. 500 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯುಕ್ತಿಗೊಳಿಸಲಾಗಿದೆ. ಸದ್ಯ ಗಲಭೆಗೆ
ಮುಂದಾಗಿದ್ದ 16 ಮಂದಿ ಅಯ್ಯಪ್ಪನ ಭಕ್ತರನ್ನು ಪೊಲೀಸರು ಬಂಧಿಸಿದ್ದಾಗಿ ತಿಳಿದುಬಂದಿದೆ.
ಶತಮಾನಗಳ ಸಂಪ್ರದಾಯ ಮುರಿದು ಅಯ್ಯಪ್ಪನ ದರ್ಶನ ಪಡೆಯಲು ತುದುಗಾಲಲ್ಲಿ ನಿಂತಿರುವ
ಮಹಿಳಾ ಭಕ್ತರಿಗೆ ಸಂಜೆ 5 ಗಂಟೆಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಎರಡೂ ಭಕ್ತರ ಗುಂಪುಗಳು ಅಯ್ಯಪ್ಪನ
ಸನ್ನಧಿ ಬಳಿ ಬೀಡುಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಿಶೇಷ ಸೌಲಭ್ಯವಿಲ್ಲ:
ತ್ರಿವಾಂಕೂರ್ ದೆವಾಸ್ಥಾನ್ ಬೋರ್ಡ್ ಭಕ್ತೆಯರಿಗೆ ವಿಶೇಷ ಸೌಲಭ್ಯ ನೀಡಲು
ನಿರಾಕರಿಸಿದೆ. ಆದರೆ ಸುಪ್ರೀಂ ತೀರ್ಪನ್ನು ಪಾಲಿಸುವುದಾಗಿ ಹೇಳಿದೆ.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 