ಅಕ್ರಮ ಗಾಂಜಾ ಮಾರಾಟ: ವ್ಯಕ್ತಿಯ ಬಂಧನ
ಕೊಪ್ಪಳ 19: ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ನೇತೃತ್ವದ ತಂಡವು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ ವ್ಯಕ್ತಿಯನ್ನ ಬಂಧಿಸಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡಿಯಿಂದ ಸಾಣಾಪುರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ (ಸಾಣಾಪುರ ಗ್ರಾಮದ ಹತ್ತಿರ ಇರುವ) ನಯನ ಫಾಸ್ಟ್ ಫುಡ್ ಹೋಟಲ್ ಎದುರುಗಡೆಯ ಜಾಗೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ನಿಂಗಪ್ಪ ತಂದೆ ಯರಿಸ್ವಾಮಿ ಹರಗೋಲ (35) ಎಂಬ ವ್ಯಕ್ತಿಯನ್ನು ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ನೇತೃತ್ವದ ತಂಡವು ಶುಕ್ರವಾರದಂದು ಬಂಧಿಸಿದೆ. ಅಲ್ಲದೇ ಅಬಕಾರಿ ತಂಡದವರು ಆರೋಪಿತನಿಂದ ಸುಮಾರು 25000 ಮೌಲ್ಯದ 800 ಗ್ರಾಂ. ಗಾಂಜಾವನ್ನ ವಶಡಿಸಿಕೊಂಡಿದ್ದಾರೆ.
ಆರೋಪಿತನ ವಿರುದ್ಧ ಕಲಂ 8(ಬಿ),8(ಸಿ),20(ಬಿ)25,27,28,29 ರಡಿ ಪ್ರಕರಣ ದಾಖಲಿಸಲಾಗಿದೆ. ಅಬಕಾರಿ ಉಪ ಅಧೀಕ್ಷಕ ದೇಮಣ್ಣ, ಜಿಲ್ಲಾ ವಿಚಕ್ಷಣಾದಳ ಅಬಕಾರಿ ನಿರೀಕಕ ಮಹದೇವ ಪೂಜಾರಿ, ಅಬಕಾರಿ ರಕ್ಷಕ ಸಿಬ್ಬಂಧಿಗಳಾದ ಶಿವಪುತ್ರಪ್ಪ, ನಾಗಮುನಿಸ್ವಾಮಿ, ಜಕ್ಕಪ್ಪ, ಟಿ. ಶ್ರೀಧರ, ಹುಸೇನ್ ಬಾಷಾ ಮತ್ತು ಶಿವಾನಂದ ಇದೇ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 