ಮಾನವೀಯತೆ ಇದ್ದಲ್ಲಿ ಧರ್ಮ ಇರುತ್ತದೆ: ಕುಲಕರ್ಣಿ
ಗೋಕಾಕ 10: ಮಾನವೀಯತೆ ಎಲ್ಲಿ ಇರುತ್ತದೇಯೂ ಅಲ್ಲಿ ಧರ್ಮ ಇರುತ್ತದೆ, ಅದಕ್ಕಾಗಿಯೆ ಮಹಾಮಾನವತಾದಿ ಬಸವಣ್ಣನವರರು ದಯವೇ ಧರ್ಮದ ಮೂಲವೆಂದು ತಿಳಿಸಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ವಸಂತರಾವ ಕುಲಕರ್ಣಿ ಹೇಳಿದರು.
ಇಲ್ಲಿಯ ವಿದ್ಯಾ ನಗರದಲ್ಲಿ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ಆಯೋಜಿಸಿದ್ದ 10ನೇ ಮಾಸಿಕ ಚಿಂತನಾಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿಯೊಂದು ಎಲ್ಲ ಧರ್ಮಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ರೂಪಿತವಾಗಿವೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಹಿರೇಮಠ ಮಾತನಾಡುತ್ತಾ ಎಲ್ಲ ಧರ್ಮಗಳ ಆಚರಣೆಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ವಿಚಾರಗಳಾಗಿವೆ. ಯಾವುದೇ ಗೊಡ್ಡು ಸಂಪ್ರದಾಯಗಳಿಲ್ಲ, ದೇವಸ್ಥಾನಕ್ಕೆ ಹೋಗುವುದು, ಅಲ್ಲಿ ಗಂಟೆ ಬಾರಿಸುವುದಕ್ಕೆ ವೈಜ್ಞಾನಿಕ ಹಿನ್ನಲೆ ಇದೆ. ಗಂಟೆ ಬಾರಿಸುವುದರಿಂದ ಸಕಾರಾತ್ಮಕ ತರಂಗಗಳು ಮೂಡಿ ಮನಸ್ಸಿನ ಪ್ರಶಾಂತೆತೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗ ತಾಲೂಕ ಘಟಕದ ಅಧ್ಯಕ್ಷೆ ಮಹಾನಂದಾ ಪಾಟೀಲ ವಹಿಸಿದ್ದರು.
ವೇದಿಕೆ ಮೇಲೆ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಮದಭಾಂವಿ, ಕ.ಸ.ಪಾ ತಾಲೂಕಾಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಪುಷ್ಪಾ ಮುರಗೋಡ, ಶಕುಂತಲಾ ದಂಡಗಿ ಇದ್ದರು.
ಸುಮೀತ್ರಾ ಬಾರಕಿ ಸ್ವಾಗತಿಸಿದರು, ವಿನೂತಾ ನಾವಲಗಿ ನಿರೂಪಿಸಿದರು, ವಸುಂಧರಾ ಕಾಳೆ ವಂದಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 