ಮಾನವೀಯತೆ ಇದ್ದಲ್ಲಿ ಧರ್ಮ ಇರುತ್ತದೆ: ಕುಲಕರ್ಣಿ
ಗೋಕಾಕ 10: ಮಾನವೀಯತೆ ಎಲ್ಲಿ ಇರುತ್ತದೇಯೂ ಅಲ್ಲಿ ಧರ್ಮ ಇರುತ್ತದೆ, ಅದಕ್ಕಾಗಿಯೆ ಮಹಾಮಾನವತಾದಿ ಬಸವಣ್ಣನವರರು ದಯವೇ ಧರ್ಮದ ಮೂಲವೆಂದು ತಿಳಿಸಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ವಸಂತರಾವ ಕುಲಕರ್ಣಿ ಹೇಳಿದರು.
ಇಲ್ಲಿಯ ವಿದ್ಯಾ ನಗರದಲ್ಲಿ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ಆಯೋಜಿಸಿದ್ದ 10ನೇ ಮಾಸಿಕ ಚಿಂತನಾಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿಯೊಂದು ಎಲ್ಲ ಧರ್ಮಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ರೂಪಿತವಾಗಿವೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಹಿರೇಮಠ ಮಾತನಾಡುತ್ತಾ ಎಲ್ಲ ಧರ್ಮಗಳ ಆಚರಣೆಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ವಿಚಾರಗಳಾಗಿವೆ. ಯಾವುದೇ ಗೊಡ್ಡು ಸಂಪ್ರದಾಯಗಳಿಲ್ಲ, ದೇವಸ್ಥಾನಕ್ಕೆ ಹೋಗುವುದು, ಅಲ್ಲಿ ಗಂಟೆ ಬಾರಿಸುವುದಕ್ಕೆ ವೈಜ್ಞಾನಿಕ ಹಿನ್ನಲೆ ಇದೆ. ಗಂಟೆ ಬಾರಿಸುವುದರಿಂದ ಸಕಾರಾತ್ಮಕ ತರಂಗಗಳು ಮೂಡಿ ಮನಸ್ಸಿನ ಪ್ರಶಾಂತೆತೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗ ತಾಲೂಕ ಘಟಕದ ಅಧ್ಯಕ್ಷೆ ಮಹಾನಂದಾ ಪಾಟೀಲ ವಹಿಸಿದ್ದರು.
ವೇದಿಕೆ ಮೇಲೆ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಮದಭಾಂವಿ, ಕ.ಸ.ಪಾ ತಾಲೂಕಾಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಪುಷ್ಪಾ ಮುರಗೋಡ, ಶಕುಂತಲಾ ದಂಡಗಿ ಇದ್ದರು.
ಸುಮೀತ್ರಾ ಬಾರಕಿ ಸ್ವಾಗತಿಸಿದರು, ವಿನೂತಾ ನಾವಲಗಿ ನಿರೂಪಿಸಿದರು, ವಸುಂಧರಾ ಕಾಳೆ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 