ಐಜಿಪಿ ನಂಜುಂಡಸ್ವಾಮಿಗೆ ಸನ್ಮಾನ
ಲೋಕದರ್ಶನ ವರದಿ
ಕೊಪ್ಪಳ 16: ಪಕ್ಕದ ರಾಯಚೂರು ಜಿಲ್ಲೆಯ, ರಾಯಚೂರು ನಗರದಲ್ಲಿರುವ ಎಸ್ಪಿ ಕ್ರೀಡಾಂಗಣದಲ್ಲಿ ಮಂಗಳವಾರ ರಂದು ಜರುಗಿದ ಪೋಲಿಸ್ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ. ನಂಜುಂಡಸ್ವಾಮಿಯವರಿಗೆ ನ್ಯೂಸ್ ಮೀಡಿಯಾ ಅಸೊಸಿಯೆಷನ್ ನಿರ್ದೇಶಕ ಎ.ಮೊಹಮ್ಮದ್ ರಫಿ ನೇತೃತ್ವದ ತಂಡ ಭೇಟಿ ಮಾಡಿ ಅವರನ್ನು ಸನ್ಮಾನಿಸಿ ಇದೇ ದಿ. 27ರಂದು ಬೆಂಗಳೂರಿನ ಸಿಟಿ ಸೆಂಟ್ರೆಲ್ ಹಾಲ್ನಲ್ಲಿ ನಡೆಯುವ ಅಸೋಸಿಯೆಷನ್ನ 3ನೇ ವಾಷರ್ಿಕೊತ್ಸವ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.
ಪೋಲಿಸ್ ಇಲಾಖೆಯ ಬಳ್ಳಾರಿ ವಲಯ ಐಜಿಪಿಯವರಾದ ಎಂ.ನಂಜುಂಡಸ್ವಾಮಿಯವರು ಅಸೊಸಿಯೆಷನ್ ವತಿಯಿಂದ ಸನ್ಮಾನ ಮತ್ತು ಆಮಂತ್ರಣ ಸ್ವೀಕರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಿಜಾಪುರ ಸಾಹೆಬ್, ಅಬ್ದುಲ್ ರೆಹ್ಮಾನ, ವಸೀಮ್ ರಝ್ವಿ, ಅಜೀಮುದ್ದಿನ್, ಸಾದಿಕ್ ಹುಸೇನ್, ಸುಹೇಲ್ ಹುಸೇನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 