ಜನೌಷಧಿ ಕೇಂದ್ರ, ಆಸ್ಪತ್ರೆ ಕ್ಯಾಂಟೀನ್‌ಗಳ ಮೇಲೆ ಆರೋಗ್ಯ ಅಧಿಕಾರಿಗಳ ಧಿಡೀರ್ ದಾಳಿ

ಜನೌಷಧಿ ಕೇಂದ್ರ, ಆಸ್ಪತ್ರೆ ಕ್ಯಾಂಟೀನ್‌ಗಳ ಮೇಲೆ ಆರೋಗ್ಯ ಅಧಿಕಾರಿಗಳ ಧಿಡೀರ್ ದಾಳಿ  Health officials conduct surprise raids on Janaushadhi Kendras and hospital canteens

ಜನೌಷಧಿ ಕೇಂದ್ರ, ಆಸ್ಪತ್ರೆ ಕ್ಯಾಂಟೀನ್‌ಗಳ ಮೇಲೆ ಆರೋಗ್ಯ ಅಧಿಕಾರಿಗಳ ಧಿಡೀರ್ ದಾಳಿ  

ಮುಂಡಗೋಡ 31: ತಾಲೂಕು ಆಸ್ಪತ್ರೆ ಆಡಳಿತ ಆರೋಗ್ಯ ಅಧಿಕಾರಿಗಳು ಹಾಗೂ ಅವರ ತಂಡ ತಾಲೂಕು ಆಸತ್ರೆ ಆವರಣದಲ್ಲಿರುವ ಜನೌಷಧಿ ಕೇಂದ್ರ ಮತ್ತು ಕ್ಯಾಂಟೀನ್ ಮೇಲೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಬುಧವಾರ ಧಿಡೀರ್‌ನೆ ದಾಳಿ ನಡಿಸಿದ್ದಾರೆ.  

ಜನೌಷಧಿ ಕೇಂದ್ರದಲ್ಲಿ ಬ್ರಾಂಡೆಡ್ ಓಷಧಿ ಇರುವುದು ಪತ್ತೆಯಾಗಿದೆ ಹಾಗೂ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿರುವ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇಲ್ಲದಿರುವ ಕಂಡುಬಂದಿದೆ. ಅಲ್ಲೆ, ಅಸಲೀ ಟೆಂಡರದಾರರನ್ನು ಬಿಟ್ಟು ಬೇರೆಯವರು ಕ್ಯಾಂಟೀನ್ ನಡೆಸುತ್ತಿರುವುದು ಕಂಡು ಬಂದಿದೆಯಂತೆ ಹಾಗೂ ಬೇರೆಯವರ ಫೋನ್ ಪೇ ಸ್ಕ್ಯಾನರ್ ಇರುವುದನ್ನು ಪ್ರಶ್ನೆ ಮಾಡಿ ಟೆಂಡರ್ ದಾರರಿಗೆ ನೋಟಿಸ್ ಜಾರಿಗೊಳಿಸಲು ಎಂದು ತಿಳಿಸಿದ್ದಾರೆ.  

ಈ ಎರಡು ದಾಳಿಯ ಕುರಿತು ಮೇಲಾಧಿಕಾರಿಗಳಿಗೆ ವರದಿ ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಎಎಮ್ ಒ ಡಾ. ಸ್ವರೂಪರಾಣಿ ಪಾಟೀಲ, ಎಎಒ ಉಮೇಶ ಪುದಳೆ, ಎಸ್‌.ಡಿ.ಎ. ವಿನಾಯಕ, ಸೂಪರಿಂಟೆಂಡೆಂಟ್ ಸಂಜಯ ಕಟಾವಕರ, ವಿಶಾಲ ಮತ್ತು ವಾಸೀಮ್ ದಾಳಿಯಲ್ಲಿ ಇದ್ದರು.