ಬೆಳಗಾವಿ: ಆರೋಗ್ಯ ತಪಾಸಣಾ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ 19: ನಗರದ ಜೈನ್ ಪಾಲಿಟೆಕ್ನಿಕ್ನ ಎನ್ಎಸ್ಎಸ್ ಘಟಕ ಖಾನಾಪುರ ತಾಲೂಕು ಗಣೆಬೈಲ್ ಗ್ರಾಮದಲ್ಲಿ ಹಮ್ಮಿಕೊಂಡಿರುವ ವಿಶೇಷ ಶಿಬಿರದಲ್ಲಿ ಬೆಳಗಾವಿಯ ಬಿಎಚ್ಎಸ್ ಲೇಕ್ವ್ಯೂವ್ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಗ್ರಾಮದ ನೂರಾರು ನಾಗರಿಕರು ಪಡೆದುಕೊಂಡರು.
ನಾಗರಿಕರು ಅನುಸರಿಸಬೇಕಾದ ಆಹಾರ ಕ್ರಮ, ವ್ಯಾಯಾಮ, ತೂಕ ನಿಯಂತ್ರಣ ಸೇರಿದಂತೆ ಇತರ ಆರೋಗ್ಯಕರ ಚಟುವಟಿಕೆಗಳ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಮೂಳೆ ಚಿಕಿತ್ಸೆ, ಬಂಜೇತನ ಸೇರಿದಂತೆ ಇತರ ಸಮಸ್ಯೆಗಳ ಕುರಿತು ತಜ್ಞ ವೈದ್ಯರು ತಪಾಸಣೆ ನಡೆಸಿ ಸೂಕ್ತ ಸಲಹೆ ಸೂಚನೆ ನೀಡಿದರು.
ಲೇಕ್ವ್ಯೂವ್ ಆಸ್ಪತ್ರೆಯ ಆತರ್ೋಪೆಡಿಕ್ ಸರ್ಜನ್ ಡಾ. ಬಸವರಾಜ ಪಾಟೀಲ, ಡಾ. ಜಯಶ್ರೀ ಪಾಟೀಲ ಹಾಗೂ ಸಿಬ್ಬಂದಿ 120ಕ್ಕೂ ಅಧಿಕ ರೋಗಿಗಳ ಆರೋಗ್ಯ ತಪಾಸಣೆ ನಡೆಸಿದರು.
ಪ್ರಾಚಾರ್ಯ ವಿಜಯ ಕಲ್ಮಣಿ, ಡಾ. ಆನಂದ ಬಿಂಗೆ, ವಷರ್ಾ ದೇಸಾಯಿ, ಸಾತೇರಿ ನಾರಾಯಣ ಗುರವ, ಭೈರು ಗುರವ, ಡಾ. ಕಣನಾಥ್ ಶೆಟ್ಟಿ, ಡಿ ಕಾತರ್ಿ ಗುಣ, ವಾಸುದೇವ್, ಡಾ. ಗುರುಪ್ರಸಾದ ಹಗರ, ಪ್ರೊ. ಬಲರಾಮ ಕಾಮ್ಕರ, ಪ್ರೊ. ಸೂರಜ್ ಸುತಾರ, ಪ್ರೊ. ಪ್ರಕಾಶ ಸೋನ್ವಾಲ್ಕರ ಮತ್ತಿತರು ಉಪಸ್ಥಿತರಿದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 