ಗಟಾರಿನ ದುನರ್ಾತ : ಸಾರ್ವಜನಿಕರಿಗೆ ಸಂಕಟ
ಧಾರವಾಡ 02: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 11 ನೇ ವಾರ್ಡ ವ್ಯಾಪ್ತಿಯಲ್ಲಿ ಗಾಂಧೀಚೌಕ್ ಬಳಿ ರಸ್ತೆ ಬದಿಯ ಗಟಾರೊಂದು ತೆರೆದುಕೊಂಡಿದ್ದು ವಿಪರೀತ ದುನರ್ಾತ ಹೊರಸೂಸಿ ಸಾರ್ವಜನಿಕರು ನಿತ್ಯವೂ ಸಂಕಟ ಅನುಭವಿಸುವಂತಾಗಿದೆ.
ಸ್ವಚ್ಛ ಭಾರತ ಅಭಿಯಾನದ ಲೋಗೋದಲ್ಲಿ ಗಾಂಧೀಜಿ ಕನ್ನಡಕವನ್ನೇ ಬಳಸಲಾಗಿದ್ದು, ಗಾಂಧೀಜಿ ಹೆಸರಿನ ಚೌಕ್ ಬಳಿಯೇ ಸ್ವಚ್ಛತೆಗೆ ಗಮನ ನೀಡದಿರುವುದು ಈಗ ಚಚರ್ೆಗೆ ಗ್ರಾಸ ಒದಗಿಸಿದೆ. ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧೀಚೌಕ್ದಲ್ಲಿ ಈ ಕೊಳಕು ವಾಸನೆಯ ಚರಂಡಿ ತೆರೆದುಕೊಂಡಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ ಎಂದು ಈ ಭಾಗದ ಹಿರಿಯ ನಾಗರಿಕರು ದೂರಿದ್ದಾರೆ.
ಈ ತೆರೆದುಕೊಂಡ ಚರಂಡಿ ಹತ್ತಿರವೇ ಔಷಧಿಯ ಅಂಗಡಿ ಇದ್ದು, ಇತ್ತೀಚೆಗೆ ವೃದ್ಧೆಯೋರ್ವಳು ಮಾತ್ರೆಗಳನ್ನು ತೆಗೆದುಕೊಳ್ಳಲು ಔಷಧಿ ಅಂಗಡಿಗೆ ಬಂದಾಗ ಈ ವಾಸನೆ ಸಹಿಸಿಕೊಳ್ಳದೇ ಸ್ಥಳದಲ್ಲಿಯೇ ವಾಂತಿ ಮಾಡಿಕೊಂಡು ತೊಂದರೆ ಅನುಭವಿಸಿದಳೆಂದು ಇಲ್ಲಿಯ ಜನರು ಹೇಳುತ್ತಾರೆ. ಸಮೀಪದಲ್ಲಿಯೇ
ಕೂಡಲೇ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಈ ಕುರಿತು ಸೂಚನೆ ನೀಡಿ ಶೀಘ್ರವಾಗಿ ಈ ತೆರೆದುಕೊಂಡ ಗಟಾರನ್ನು ಸ್ವಚ್ಛಗೊಳಿಸಿ ಮೇಲೆ ಹೊದಿಕೆಯ ವ್ಯವಸ್ಥೆ ಕಲ್ಪಿಸಿ ಕೊಳಕು ದುನರ್ಾತ ಹೊರಸೂಸದಂತೆ ಸೂಕ್ತ ದುರಸ್ತಿ ಕಾಮಗಾರಿ ಕೈಕೊಳ್ಳಬೇಕೆಂದು ಇಲ್ಲಿಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು
ಗದಗದಲ್ಲಿ ಮಾನಸಿಕ ಅಸ್ವಸ್ಥ ಯುವತಿಯ ಮೇಲೆ ಅತ್ಯಾಚಾರ ಆರೋಪ
ಹಿಡಕಲ್ ಜಲಾಶಯದ ನೀರಿನಲ್ಲಿ ವೃದ್ದೆಯ ಶವ ಪತ್ತೆ : ಹಳೇಗುಡನಟ್ಟಿ ಬಳಿ ಘಟನೆ
ಡ್ರಗ್ ಅವೇರ್ನೆಸ್ ವೀಕ್: ಆಚರಣೆ, ಕಾರ್ಯಾಚರಣೆ 12.38 ಲಕ್ಷ ಮಾಕದ ವಶ, 16 ಪ್ರಕರಣ ದಾಖಲು, 4 ಬಂಧನ
ರಾಜ್ಯ ನೇಕಾರರ ಸಂಘದಿಂದ ನಾಳೆ ಬೆಳಗಾವಿ ಚಲೋ ಕಾರ್ಯಕ್ರಮ : ಸಿಎಂ ಮುಂದೆ ಬೇಡಿಕೆಗಳ ಪಟ್ಟಿ
ಕ್ರಿಕೇಟಿಗ್ ಧೋನಿ ಬೆಳಗಾವಿಗೆ ಕರೆಸಿ : ವಿದ್ಯಾರ್ಥಿಗಳಿಂದ ಡಿಸಿಗೆ ವಿಭಿನ್ನ ಮನವಿ 