ಗದಗ: ಮೇವು ಬ್ಯಾಂಕ್ ಪ್ರಾರಂಭ:ಯೋಜನಾ ನಿರ್ದೇಶಕ ಟಿ.ದಿನೇಶ ಪರಿಶೀಲನೆ
ಗದಗ 22: ತೀವ್ರ ಬರ ಹಿನ್ನಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಮೇವು ಪೊರೈಸುವುದಕ್ಕಾಗಿ ಮಾ. 16ರಂದು ಮುಂಡರಗಿಯ ಡೋಣಿ ಹಾಗೂ ಶಿರಹಟ್ಟಿಯ ಎಪಿಎಂಸಿ ಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ.ಇಲ್ಲಿ ತಲಾ 5 ಮೆಟ್ರಿಕ್ ಟನ್ ಮೇವನ್ನು ಸಂಗ್ರಹಿಸಲಾಗಿದೆ. ಮಾ. 19 ರಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ಮೇವು ಬ್ಯಾಂಕ್ ನಲ್ಲಿ 6.9 ಟನ್ ಮುಂಡರಗಿ ತಾಲೂಕಿನ ಕದಾಂಪುರ ಮೇವು ಬ್ಯಾಂಕ್ನಲ್ಲಿ 6.5 ಮೆ.ಟನ್ ಹಾಗೂ ಬಾಗೇವಾಡಿಯಲ್ಲಿ 9.3 ಮೆ.ಟನ್ ಮೇವು ಇದ್ದು, ಆಯಾ ಮೇವು ಬ್ಯಾಂಕ್ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಹೊಂದಿರುವವರು ಪಶು ವೈದ್ಯಕೀಯ ನೀಡಿರುವ ಪ್ರಮಾಣ ಪತ್ರದೊಂದಿಗೆ ಬಂದು ಪ್ರತಿ ಕೆಜಿಗೆ 2 ರೂ ರಿಯಾಯ್ತಿ ದರದಲ್ಲಿ ನಿಗದಿತ ಮೇವನ್ನು ಪಡೆಯಬಹುದಾಗಿದೆ ಎಂದು ಪಶು ವೈದ್ಯ ಇಲಾಖೆ ತಿಳಿಸಿದೆ. ಬೆಳ್ಳಟ್ಟಿಯ ಮೇವು ಬ್ಯಾಂಕಿಗೆ ಗದಗ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಟಿ.ದಿನೇಶ ಬೇಟಿ ನೀಡಿ ಪರಿಶೀಲಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 