ಚೈಲ್ಡ್ ಲೈನ್ನೊಂದಿಗೆ ಸ್ನೇಹ ಸಪ್ತಾಹ ಕಾರ್ಯಕ್ರಮ
ಲೋಕದರ್ಶನ ವರದಿ
ಬೆಳಗಾವಿ 19: ಕಿವುಡ ಮಕ್ಕಳ ಸರಕಾರಿ ಶಾಲೆ ಬೆಳಗಾವಿಯಲ್ಲಿ ದಿ.18ರಂದು ಚೈಲ್ಡ್ ಲೈನ್ ಸಹಯೋಗದಲ್ಲಿ ಸ್ನೇಹ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ವಿದ್ಯಾಥರ್ಿಗಳಿಗಾಗಿ ಆಟೋಟ ಸ್ಪಧರ್ೆಯನ್ನು ಏರ್ಪಡಿಸಲಾಗಿತ್ತು. ಸ್ಪಧರ್ೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಮಾರಂಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಸಿಸ್ಟರ್ ಲೂದರ್್ ಮಾತನಾಡಿ ಸರಕಾರದ ಯೋಜನೆಗಳನ್ನು ಕುರಿತು ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.
ಈ ಸಭೆಯಲ್ಲಿ ಕಿವುಡ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕರಾದ ಆರ್.ಬಿ.ಬನಶಂಕರಿರವರು ಅಧ್ಯಕ್ಷತೆ ವಹಿಸಿದ್ದರು. ಹಾಗೂ ಕೈಗಾರಿಕಾ ಮತ್ತು ಹಿರಿಯ ನಾಗರಿಕ ಸಹಾಯವಾಣಿ ಜಂಟಿ ನಿದರ್ೇಶಕ ಎಮ್.ಎಸ್. ಮುದಕವಿ, ಹಿರಿಯ ನಾಗರಿಕ ಸಂಸ್ಥೆಯ ಪದಾಧಿಕಾರಿ ಬಸವರಾಜ ನಿವರ್ಾಣಿ, ಶಿವಲೀಲಾ ಹಿರೇಮಠ, ರಾಜು ಬೋಜಪ್ಪಗೋಳ, ನಿಂಗಪ್ಪ ಮರಿಕಟ್ಟಿ, ಸುಧಾ ಗಟ್ಟಿ, ಹಾಗೂ ಶಾಲೆಯ ಶಿಕ್ಷಕರಾದ ಶಂಕರಗೌಡ ಪಾಟೀಲ, ಸಂತೋಷ ಕುಮಾರ, ಎಮ್.ಮುರಳೀಧರ, ಸಂತೋಷ ಕೆ. ರತ್ನಮ್ಮ ಪಿ, ಶಿವಜ್ಯೋತಿ, ದೀಪಾ ಕಂಬಾರ, ರಶ್ಮೀ ನವಲಕರ, ಸವಿತಾ ಹೋಳಿ, ಸವಿತಾ ಕೇರೂರ ಉಪಸ್ಥಿತರಿದ್ದರು.
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ? 