ಬಲವಂತದ ಬಾಲ್ಯ ವಿವಾಹ ವದಂತಿ, ಸಾಂತ್ವನ ಕೇಂದ್ರಕ್ಕೆ ಬಾಲಕಿ ವಶ
ಲೋಕದರ್ಶನ ವರದಿ
ಮಹಾಲಿಂಗಪುರ 17: ಒತ್ತಾಯ ಪೂರ್ವಕವಾಗಿ ಬಾಲ್ಯ ವಿವಾಹ ಮಾಡಿಸುವ ಸಂದರ್ಭದಲ್ಲಿ ದಾಳಿ ನಡೆಸಿ ಬಾಲಕಿಯನ್ನು ವಶ ಪಡೆದು ಸಾಂತ್ವನ ಕೇಂದ್ರಕ್ಕೆ ಸೇರಿಸಿದ ಘಟನೆ ಮಹಾಲಿಂಗಪುರ ಪೊಲೀಸ್ ಠಾಣೆ ವ್ಯಾಪ್ತಿ ನಡೆದಿದೆ.
ಸ್ಥಳೀಯ ಹುಲಕುಂದ ಓಣಿಯ ಅಪ್ರಾಪ್ತ ವಯಸ್ಸಿನ (17 ವರ್ಷದ) ಸ್ವಾತಿ ಸದಾಶಿವ ನಾವಿ ಎಂಬ ಬಾಲಕಿಯನ್ನು ಬಲವಂತವಾಗಿ ಬಾಲ್ಯ ವಿವಾಹಕ್ಕೆ ಒಳಪಡಿಸುವಾಗ ಅನಾಮಿಕರು ನೀಡಿದ ದೂರಿನನ್ವಯ ಕ್ರಮ ಜರುಗಿಸಲಾಯಿತು. ಬಾಲ್ಯ ವಿವಾಹದ ಒತ್ತಾಯಕ್ಕೊಳಗಾದ ಒಳಗಾದ ಬಾಲಕಿಯನ್ನು ಜಮಖಂಡಿಯ ಸಾಂತ್ವನ ಕೇಂದ್ರ ಬಾಲಮಕ್ಕಳ ಸಂರಕ್ಷಣೆ ವಿಭಾಗಕ್ಕೆ ಒಪ್ಪಿಸಲಾಯಿತು..
ಪೋಸ್ಕೋ ಕಾಯ್ದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ಮಹಿಳಾ ಪೇದೆ ರೂಪಾ ರಾಚನ್ನವರ ಹಾಗೂ ಎಎಸೈ ಕೆ.ಬಿ.ಮಾಂಗ ಅವರು ಪುರಸಭೆ ಆರೋಗ್ಯ ವಿಭಾಗದ ತನಿಖಾಧಿಕಾರಿ ಇಫರ್ಾನ್ ಝಾರೇ, ಮಹಾಲಿಂಗಪುರ ಗ್ರಾಮ ಲೆಕ್ಕಾಧಿಕಾರಿ ಎಸ್.ಎಂ.ಕೆಂದೂರ ಕಾಯರ್ಾಚರಣೆಯಲ್ಲಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 