ಒಳ್ಳೆಯ ಸಂಘಗಳ ಅನುಸರಣೆ ಮಾಡಿ : ನಿಂಗಪ್ಪ ಸುಣಗಾರ
Follow good associations : Ningappa Sunagara
ಒಳ್ಳೆಯ ಸಂಘಗಳ ಅನುಸರಣೆ ಮಾಡಿ : ನಿಂಗಪ್ಪ ಸುಣಗಾರ
ಶಿಗ್ಗಾವಿ 16: ಒಳ್ಳೆಯ ಸಂಘಗಳ ಅನುಸರಣೆ ಮಾಡಿ ಕೆಟ್ಟ ಸಂಘದ ಸಹವಾಸ ಬಿಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ ಸುಣ್ಣಗಾರ ಕಿವಿ ಮಾತು ಹೇಳಿದರು.ತಾಲೂಕಿನ ಶಿಶುವಿನಹಾಳ ಮಠದಲ್ಲಿ ಹುಲಗೂರ ವಲಯದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಸಾಮೂಹಿಕ ಸತ್ಯ ನಾರಾಯಣ ಪೂಜೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಒಂದಾಗಿ ಬಾಳಬೇಕು ನಮ್ಮಂತೆ ಇತರರನ್ನು ಬದುಕಲು ಬೀಡಬೇಕು ಹಾಗೂ ನಮ್ಮ ಮಕ್ಕಳು ಹೆತ್ತವರಿಗೆ ರತ್ನವಾಗುವಂತೆ ಬೆಳಸಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಮ. ನಿ. ಪ್ರ ಅಭಿನವ ಬಸವಣ್ಣಜ್ಜ ದಿವ್ಯ ಸಾನಿಧ್ಯವಹಿಸಿ ಆರ್ಶಿವದಿಸಿ ವಿಶ್ವ ಗುರುವಿನ ದೇಶದಲ್ಲಿ ನಾವೆಲ್ಲರೂ ಭೂಮಿತಾಯಿಯನ್ನು ಪೂಜಿಸಿದರೇ ಆ ತಾಯಿ ನಮ್ಮನ್ನು ರಕ್ಷಿಸುತ್ತಾಳೆ ಎಂದರು. ಹುಲಗೂರ ಠಾಣೆ ಪೋಲಿಸ ಅಧಿಕಾರಿ ಎಸ್.ಎನ್. ವಿಠಣ್ಣನವರ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ಚನ್ನಬಸಪ್ಪ.ಬೆಟ್ಟದೂರವಹಿಸಿದ್ದರುಹಾಗೂ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು ಪ್ರಾಸ್ತಾವಿಕವಾಗಿ ಹಾಗೂ ಎಲ್. ಎಸ್. ಗುರುವಾಯ್ಯನ ಮಾತನಾಡಿದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿ ಉಮಾ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಶಿಶುವಿನಾಳ ಮಠದ ಕಮಿಟಿ ಸದಸ್ಯರು ಹಾಗೂ ಶ್ರೀ ಸತ್ಯ ನಾರಾಯಣ ಪೂಜಾ ಸಮಿತಿ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 