ರಾಜ್ಯಮಟ್ಟದ ಐಎಸ್ಟಿಇ ಸ್ಪರ್ಧೆಗಳಲ್ಲಿ ಪ್ರಥಮ
First in state-level ISTE competitions
ಮಹಾಲಿಂಗಪುರ 03: ಬಾಗಲಕೋಟೆಯ ಬಿವಿವಿಎಸ್ ಪಾಲಿಟೆಕ್ನಿಕ್ನಲ್ಲಿ ಇತ್ತೀಚೆಗೆ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯಮಟ್ಟದ 5ನೇ ಐಎಸ್ಟಿಇ ಸ್ಪರ್ಧೆಗಳಲ್ಲಿ ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.
ಮೆಕ್ಯಾನಿಕಲ್ ವಿಭಾಗದ ಭಾವಿಕ್ ಓಸ್ವಾಲ್ ಪೇಪರ್ ಪ್ರೆಜೆಂಟೇಶನ್ನಲ್ಲಿ ಪ್ರಥಮ, ಇಲೆಕ್ಟ್ರಿಕಲ್ ವಿಭಾಗದ ಶಿವಾನಂದ ನಾಗನೂರ ಪೋಸ್ಟರ್ ಮೇಕಿಂಗ್ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರಿಗೆ ವಂದನಾ ಪಸಾರ, ಯು.ಡಿ.ಹಾದಿಮನಿ, ಸುಭಾಸ್ ಮೂಶಿ, ಲಕ್ಷ್ಮೀ ಅಂಗಡಿ, ಚೇತನ ಕುಂದರಗಿ, ಲಕ್ಷ್ಮೀ ಪಾಟೀಲ, ಮಂಜುನಾಥ ಅರಕೇರಿ, ವಿಶಾಲ ಮೆಟಗುಡ್ಡ ಮಾರ್ಗದರ್ಶನ ಮಾಡಿದ್ದರು.
ದೂರದ ಮಂಗಳೂರು, ಮೂಡಬಿದರೆ, ಬೆಂಗಳೂರು, ಗದಗ, ಹುಬ್ಬಳ್ಳಿ, ನಿಡಸೋಸಿ, ಬಾಗಲಕೋಟೆ, ಬೀಳಗಿ ಸೇರಿದಂತೆ 20 ಪಾಲಿಟೆಕ್ನಿಕ್ನಿಂದ 180 ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅದರಲ್ಲಿ ಗ್ರಾಮೀಣ ಭಾಗದ ಮಹಾಲಿಂಗಪುರದ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಾಧನೆ ಹೆಮ್ಮೆ ತಂದಿದೆ ಪ್ರಾಚಾರ್ಯ ಎಸ್.ಐ.ಕುಂದಗೋಳ ತಿಳಿಸಿದ್ದಾರೆ. ಮಹಾಲಿಂಗಪುರ ಕೆಎಲ್ಇ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ರಾಜ್ಯಮಟ್ಟದ ಐಎಸ್ಟಿಇ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 