ಗಟ್ಟಿ ಆರೋಗ್ಯಕ್ಕೆ ಸಿರಿಧಾನ್ಯಗಳೇ ಮದ್ದು: ಹುಂಡೇಕರ್
ಲೋಕದರ್ಶನ ವರದಿ
ಬೆಳಗಾವಿ 25: ಹಿಂದಿನ ಹಿರಿಯರ ಆರೋಗ್ಯದ ಗುಟ್ಟಿನ ಮೂಲವಾಗಿರುವ ಸಿರಿಧಾನ್ಯಗಳಲ್ಲಿ ಮಹಿಳೆಯರು ತಯಾರಿಸಿದ ಖಾದ್ಯಗಳು ಬೆರಗು ಮೂಡಿಸುವಂತಿವೆ ಎಂದು ವಿದ್ಯಾ ಹುಂಡೇಕರ ಹೇಳಿದರು.
ನಗರದ ಟಿಳಕವಾಡಿಯ ನೌಕರರ ಸಭಾಭವನದಲ್ಲಿ ರವಿವಾರ ಆಯೋಜಿಸಲಾಗಿದ್ದ ಭುವನೇಶ್ವರಿ ಉತ್ಸವದ ಹಿನ್ನೆಲೆಯಲ್ಲಿ ವಿವಿಧ ಸಿರಿಧಾನ್ಯಗಳ ಸ್ಪಧರ್ೆಗಳು ಜರಗಿದವು.
ಹೂಗಳಿಲ್ಲದೇ ಕೇವಲ ಎಲೆಗಳಿಂದ ಮಾತ್ರ ತಯಾರಿಸಿದ ಸುಂದರ ಹೂ ಕುಂಡಗಳು ಕಣ್ಣು ಕುಕ್ಕುವಂತಿವೆ. ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆದರೆ ಮಾತ್ರ ಆರೋಗ್ಯ ಮಾಹಿತಿ ಸಿಕ್ಕಾಂಗುತ್ತದೆ ಎಂದರು.
ನಮ್ಮ ನಾಡಿನ ಸಂಸ್ಕೃತಿಯ ಬೆಳೆಗಿಸಲು ಸಿರಿಧಾನ್ಯಗಳಂತ ಭೂಮಿಯಲ್ಲಿ ಬೆಳೆದ ಧ್ಯಾನಗಳು ನಾವು ಸೇವಿಸದರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಂಡತಾಗುತ್ತದೆ. ಮನುಷ್ಯನು ರುಚಿಯಾದ ಪದಾರ್ಥಗಳ ಸೇವಿಸುವ ಬದಲು, ಎಲೆ, ಹೂ, ಸೊಪ್ಪು ಹಣ್ಣುಗಳನ್ನು ಸೇವಿಸಿ ಆರೋಗ್ಯವನ್ನು ಸದೃಢವಾಗಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಎಲೆಗಳ ಸಿಹಿ ಹಾಗೂ ಖಾರಾ ಪದಾರ್ಥ ತಯಾರಿಕೆ ಎಲೆಗಳ ಜೋಡಣೆ ಬೆಳಗಾವಿ ಕವಿತ್ರಿಯರು ಬರೆದ ಕವನ ಗಾಯನ ಸ್ಪಧರ್ೆಗಳನ್ನು ನಡೆಸಿದರು.
ನಗರದ ವಿವಿಧ ಮಹಿಳಾ ಮಂಡಳದ ಪದಾದಿಕಾರಿಗಳು, ಭಾರತಿ ಸಂಕಣ್ಣನವರ, ಜ್ಯೋತಿ ಬಾವಿಕಟ್ಟಿ, ವೀಣಾ ನಾಗಮೇತ್ರಿ, ಭಾರತಿಜಿರಗೆ, ಲಲಿತಾ ಪಾಟೀಲ, ಆಶಾ ಪಾಟೀಲ, ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಸುಜಾತಾ, ಮಮದಾಪೂರ, ಚೌಗಲಾ ಹಾಗೂ ಉಪಸ್ಥಿತರಿದ್ದರು. ಸರ್ವಮಂಗಳಾ ಅರಳಿಮಟ್ಟಿ ನಿರೂಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 