ಚಿತ್ರಕಲಾ ಸ್ಪರ್ಧೆ: ವಿಜೇತ ಮಕ್ಕಳಿಗೆ ನಗದು ಬಹುಮಾನ

ಚಿತ್ರಕಲಾ ಸ್ಪರ್ಧೆ: ವಿಜೇತ ಮಕ್ಕಳಿಗೆ ನಗದು ಬಹುಮಾನ Drawing competition: Cash prizes for winning children

ತಾಳಿಕೋಟಿ 17: ಮಕ್ಕಳ ದಿನಾಚರಣೆಯ ಪ್ರಯುಕ್ತ ದೃಶ್ಯ ಬಿಂಬ ಕಲಾ ಪ್ರತಿಷ್ಠಾನ ವಿಜಯಪುರ ಇವರ ಅಡಿಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಕುಮಾರೇಶ್ವರ ಪಬ್ಲಿಕ್ ಸ್ಕೂಲ್ ತಾಳಿಕೋಟಿನಲ್ಲಿ ಶನಿವಾರ ಏರಿ​‍್ಡಸಲಾಗಿತ್ತು. ಇದರಲ್ಲಿ ಕುಮಾರೇಶ್ವರ ಶಾಲೆಯ  1 ರಿಂದ 5ನೇ ತರಗತಿಯ ಸುಮಾರು 175 ಮಕ್ಕಳು ಭಾಗವಹಿಸಿದ್ದರು. ಮುಖ್ಯಗುರುಗಳು ಹಾಗೂ ಶಿಕ್ಷಕರು ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.  ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ತರಗತಿವಾರು ವಿಜೇತ ಮಕ್ಕಳಿಗೆ ನಗದು ಬಹುಮಾನ ನೀಡಲಾಯಿತು.  ಪ್ರಥಮ 1000 ರೂ., ದ್ವಿತೀಯ 500 ರೂ., ತೃತೀಯ 250 ರೂ. ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ದೃಶ್ಯ ಬಿಂಬ ಕಲಾ ಪ್ರತಿಷ್ಠಾನದ ಅಧ್ಯಕ್ಷ ಸತೀಶ ಕೆಮಶೆಟ್ಟಿಯವರು ಪ್ರಶಸ್ತಿ ಪತ್ರ ಮತ್ತು ಸಮಾಧಾನಕರ ಬಹುಮಾನವನ್ನು ನೀಡಿದರು.