‘ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ ಡಾ. ಅಮರೇಶ ಯತಗಲ್ ಆಯ್ಕೆ

Dr. Basamma Tulajappa Upalamvakar Memorial Literary Award. Amaresh Yatagal selected

 ‘ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಗೆ  ಡಾ. ಅಮರೇಶ ಯತಗಲ್ ಆಯ್ಕೆ 


ಕಲಬುರಗಿ 08: ಇಲ್ಲಿನ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ ನಿಯಮಿತವು ಪ್ರತಿವರ್ಷದಂತೆ ಈ ವರ್ಷವು 2023ರಲ್ಲಿ ಪ್ರಕಟವಾದ ಪುಸ್ತಕಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದ್ದು, ಕನ್ನಡನಾಡು ಪ್ರಕಾಶನದ 2024ರ ಹತ್ತು ಕೃತಿಗಳ ಲೋಕಾರೆ​‍್ಣ ಮತ್ತು 2023ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ.ಅಮರೇಶ ಯತಗಲ್ ಅವರ ‘ಗತಾನುಶೀಲನ’(ಇತಿಹಾಸ-ಸಂಸ್ಕೃತಿ) ಕೃತಿಗೆ ‘ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ’ಗೆ ಆಯ್ಕೆಮಾಡಲಾಗಿರುತ್ತದೆ. ಈ ಪ್ರಶಸ್ತಿಯು ಫಲಕ ಹಾಗೂ ಗೌರವಧನ ರೂ. 5000 (ಐದು ಸಾವಿರ)ಗಳನ್ನು ಒಳಗೊಂಡಿರುತ್ತದೆ. ಈ ಪ್ರಶಸ್ತಿ ಪ್ರದಾನ ಸಮಾರಂಭವು, ದಿ. 9ರಂದು ರವಿವಾರ ಬೆಳಗ್ಗೆ 10ಗಂಟೆಗೆ ಕಲಬುರಗಿಯ ಕನ್ನಡ ಸಾಹಿತ್ಯ ಸಂಘ, ವ್ಹಿ.ಜಿ. ಮಹಿಳಾ ಕಾಲೇಜಿನಲ್ಲಿ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.