3ತಿಂಗಳು ಕಳೆದರು ಬಿಲ್ ಸಂದಾಯ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಆಗ್ರಹ
District President of Kisan Sangh Virupaksha Hiremath demanded that they are doing injustice to the
3ತಿಂಗಳು ಕಳೆದರು ಬಿಲ್ ಸಂದಾಯ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಆಗ್ರಹ
ಬೀಳಗಿ, 03; ಕಬ್ಬು ನಿಯಂತ್ರಣ ಆದೇಶದನ್ವಯ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನದೊಳಗಾಗಿ ಸಂಬಂಧಿಸಿದ ಸಕ್ಕರೆ ಕಾರ್ಖಾನೆಯವರು ಕಬ್ಬು ಬೆಲೆಯನ್ನು ಸಂದಾಯ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ರೈತರ ಮನವಿಗೆ ಸ್ಪಂದಿಸಿ ಆದೇಶ ಹೊರಡಿಸಿದ್ದರು. ಇದನ್ನು ತಿರಸ್ಕರಿಸಿ 3ತಿಂಗಳು ಕಳೆದರು ಬಿಲ್ ಸಂದಾಯ ಮಾಡದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಸಕ್ಕರೆ ಕಾರ್ಖಾನೆ ಮಾಲಿಕರ ಮತ್ತು ಆಡಳಿತ ಮಂಡಳಿಯ ಮೇಲೆ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷ ಹಿರೇಮಠ ಹರಿಹಾಯ್ದಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಇವರು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಮತ್ತು ಆಡಳಿತ ಮಂಡಳಿಗೆ ಜಿಲ್ಲಾಧಿಕಾರಿಗಳು ಇಗಾಗಲೇ ಸೂಚಿಸಿದಂತೆ ರೈತರ ಕಬ್ಬಿನ ಬಿಲ್ 15 ದಿನದೊಳಗಾಗಿ ಪೂರೈಸಬೇಕು ಹಾಗೂ ಒಂದೇ ದರ ನೀಡಬೇಕು, ತಪ್ಪಿದಲ್ಲಿ ವಿಳಂಬಿತ ಅವಧಿಗೆ ವಾರ್ಷಿಕ ಶೇಕಡಾ 15ರಷ್ಟು ಬಡ್ಡಿಯನ್ನು ರೈತರಿಗೆ ಸಂದಾಯ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಇವರ ಆದೇಶಕ್ಕೆ ಮನ್ನಣೆ ನೀಡದೆ ಮತ್ತೇ ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ರೈತ ಸಂಘವು ಸಹಿಸುವುದಿಲ್ಲ. ಶೀಘ್ರವಾಗಿ ರೈತರಿಗೆ ಕಬ್ಬಿನ ಬಿಲ್ ನೀಡಬೇಕು. ಸಾಲ-ಸೂಲ ಮಾಡಿ ರೈತರು ಕಬ್ಬು ಬೆಳೆದು ಕಷ್ಟದಲ್ಲಿ ಸಿಲುಕಿ ನೋವು ಅನುಭವಿಸುತ್ತಿರುತ್ತಾರೆ. ಸಂಸಾರ, ಮಕ್ಕಳ ಶಾಲೆ, ಮದುವೆ ಸೇರಿದಂತೆ ಕಷ್ಟದ ಜಂಜಾಟದಲ್ಲಿ ರೈತರು ಬಳಲುತ್ತಿರುತ್ತಾರೆ. ಸಕ್ಕರೆ ಕಾರ್ಖಾನೆ ಮಾಲಿಕರು ಮತ್ತು ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳು ಹೇಳಿದಂತೆ ಕಬ್ಬಿನ ಬಿಲ್ ಸಂದಾಯ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದರೆ ಜಿಲ್ಲೆಯ ಎಲ್ಲ ರೈತರು ಸಾಮೂಹಿಕವಾಗಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 