ಇಂದಿರಾ ಕ್ಯಾಂಟೀನ್ಗೆ ಜಿಲ್ಲಾಧಿಕಾರಿ ಭೇಟಿ
ದೇವರಹಿಪ್ಪರಗಿ, 22; ಪಟ್ಟಣದ ಪಶು ಆಸ್ಪತ್ರೆಯ ಸಮೀಪ ಇರುವ ಇಂದಿರಾ ಕ್ಯಾಂಟೀನ್ ಗೆ ಶುಕ್ರವಾರದಂದು ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಭೇಟಿ ನೀಡಿ ಪರೀಶೀಲನೆ ನಡೆಸಿದರು.ನಿರ್ಮಾಣದ ಹಂತದಲ್ಲಿರುವ ಇಂದಿರಾ ಕ್ಯಾಂಟೀನ್ ಸುತ್ತಲು ಕಾಂಪೌಂಡ್ ನಿರ್ಮಾಣ ಕಾರ್ಯದ ಆಕ್ಷನ್ ಪ್ಲಾನ್ ವರದಿ ತಯಾರಿಸಲು ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಶೌಚಾಲಯ, ಕಿಟಕಿ ಬಾಗಿಲುಗಳ ಅವ್ಯವಸ್ಥೆ ಸರಿಪಡಿಸಿ ಬೇಗ ಮುಗಿಸಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚನೆ ನೀಡಲು ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಅವರಿಗೆ ತಿಳಿಸಿದರು. ನಂತರ ಪಟ್ಟಣದ ಕರಿ ದೇವರ ದೇವಸ್ಥಾನದ ಹತ್ತಿರ ಇರುವ ಜಮೀನಿಗೆ ಭೇಟಿ ನೀಡಿ ಪರೀಶೀಲನೆ ನಡೆಸಿದರು.ಇದೇ ಸಂದರ್ಭದಲ್ಲಿ ಇಂಡಿ ಉಪವಿಭಾಗಾಧಿಕಾರಿ ಆಬಿದ್ ಗದ್ಯಾಳ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಪ.ಪಂ ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ತಾಪಂ ಇಒ ಭಾರತಿ ಚೆಲುವಯ್ಯ, ಕಿರಿಯ ಅಭಿಯಂತ್ರರಾದ ಗುರುರಾಜ ಬಿರಾದಾರ, ಮುತ್ತುರಾಜ ಹಿರೇಮಠ ಸೇರಿದಂತೆ ಪ.ಪಂ ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು