ಮಾಂಜರಿ: ಅಂಕಲಿಯಿಂದ ಪಂಢರಪೂರಕ್ಕೆ ದಿಂಡಿ ಯಾತ್ರೆ
ಲೋಕದರ್ಶನ ವರದಿ
ಮಾಂಜರಿ 03: ದಿ. 12 ರಂದು ನಡೆಯಲಿರುವ ಆಷಾಢ ಎಕಾದಶಿ ನಿಮಿತ್ಯವಾಗಿ ಸಮೀಪದ ಅಂಕಲಿ ಗ್ರಾಮದ ವಿಠ್ಠಲನ ಭಕ್ತರು ಇಂದು ಪಂಢರಪೂರಕ್ಕೆ ದಿಂಡಿ ಯಾತ್ರೆ ಬೆಳೆಸಿದರು. ಪ್ರಾರಂಭದಲ್ಲಿ ಗ್ರಾಮದಲ್ಲಿ ಮೆರವಣಿಗೆ ನಡೆಸಿ ನಂತರ ಹೋರವಲಯದ ಕೃಷ್ಣಾ ನದಿಯ ದಂಡೆಯ ಮೇಲಿದ್ದ ವಿಠ್ಠಲ ಮಂದಿರದಲ್ಲಿ ಆರತಿ ಮತ್ತು ಪೂಜೆ ಮಾಡಿ ನಂತರ ದಿಂಡಿ ಪಂಡರಪೂರಕ್ಕೆ ಇಂದು ಪ್ರಸ್ತಾನಗೊಂಡಿತು.
ಹರಿಭಕ್ತ ಸುರೇಶ ಶಿಂಧೆ ಇವರ ಮುಂದಾಳತ್ವದಲ್ಲಿ ಮೈಶಾಳ, ವಿಜಯನಗರ, ಲಂಗಡೆವಾಡಿ, ತಿಪ್ಪೆಹಳ್ಳಿ, ವಾಟುಂಬರೆ, ಸಂಗೆವಾಡಿ ಮೂಲಕ ಪಂಢರಪೂರಕ್ಕೆ ತಲುಪಲಿದೆ. ಸುನೀಲ ಶಿಂಧೆ, ನಾರಾಯಣ ಶಿಂಧೆ, ರಾಜು ಭುಕಶೇಟ್ಟಿ, ಮಾರುತಿ ಶಿಂಧೆ, ಮಹಾದೇವ ಕಾಟೆ, ರಾಜು ರಾಯಮಾನೆ, ಅಜೀತ ಕೋಳಿ, ರಮೇಶ ಕೋಲೆ, ರಾಜಾರಾಮ ಚೌಗುಲೆ, ಡಾ. ರಾಜು ರಾಜಮಾನೆ, ಚನ್ನಪ್ಪಾ ಮಾಸ್ತರ, ವಿಠ್ಠಲ ಕೋರವಿ, ರಾವಸಾಹೇಬ ಮಮದಾಪೂರೆ, ಪಾಂಡು ಶಿಂಧೆ, ರೋಹಿತ ಶೀರಸೇಟ, ಮಾಲು ಮನಗುತ್ತೆ, ಸೋನಾಬಾಯಿ ಗುಂಡಕಲ್ಲೆ, ಹೌರಾಬಾಯಿ ಗೋವಿಲಕರ, ವಷರ್ಾ ರಾಯಮಾನೆ, ಶಾಂತಾ ಕೋರವಿ, ಮಹಾದೇವಿ ಕೋರವಿ, ಲತಾ ಕೋರವಿ, ಸೇರಿದಂತೆ ನೂರಾರು ಭಕ್ತರು ಕಾಲ್ನಡಗೆ ಪ್ರವಾಸ ಬೇಳೆಸಿದರು. ಈಗಾಗಲೇ ಇದೆ ಗ್ರಾಮದ ಅಂಕಲಿಕರ ಸರಕಾರ ಇವರ ಮಾನದ ಕುದುರೆಯು ಆಷಾಢ ಎಕಾದಶಿ ನಿಮಿತ್ಯವಾಗಿ ಇದೆ ದಿ. 14 ರಂದು ಪಂಢರಪೂರಕ್ಕೆ ತೆರಳಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 