ಸಾಂಸ್ಕೃತಿಕ ಪರಂಪರೆಯು ವಾರಸುದಾರಿಕೆಯನ್ನು ಉಳಿಸಿ ಹೋಗುವುದು ಸಂಸ್ಕೃತಿಯ ಪ್ರತೀಕ
Cultural heritage is a symbol of culture that preserves heredity
ಸಾಂಸ್ಕೃತಿಕ ಪರಂಪರೆಯು ವಾರಸುದಾರಿಕೆಯನ್ನು ಉಳಿಸಿ ಹೋಗುವುದು ಸಂಸ್ಕೃತಿಯ ಪ್ರತೀಕ
ವಿಜಯಪುರ, 01: ಹಿರಿಯರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವು ನೀವು ನಡೆಯುವದರಿಂದ ಮತ್ತು ಅಜ್ಜಿ ಮುತ್ತಜ್ಜನಿಂದ ವಂಶಪಾರಂಪರಗತವಾಗಿ ಬಂದಿರುವ ಒಳ್ಳೆಯ ಗುಣಗಳೇ ಮೌಲ್ಯಗಳಾಗಿ ಪರಿಣಮಿಸುತ್ತವೆಂದು ಪ್ರಾ. ಎ.ಎಸ್.ಹಿಪ್ಪರಗಿ ಪ್ರತಿಷ್ಠಾನ ಮತ್ತು ಬಿಡಿಈ ಸೊಸಾಯಿಟಿ ಪ.ಪೂ. ಕಾಲೇಜ ಸಹಯೋಗದಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಮತ್ತು ಜಾನಪದ ವಿದ್ವಾಂಸ ಪ್ರೊ. ಬಿ.ಆರ್.ಪೋಲಿಸಪಾಟೀಲರು ಸ್ವರಚಿತ ಹಾಡುಗಳನ್ನು ಹಾಡುತ್ತ ಮತ್ತು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಮಾತೃ, ಪಿತೃ, ಗುರು ಮತ್ತು ದೇಶದ ಋಣವನ್ನು ತೀರಿಸಲು ಮರೆಯಬಾರದು. ಹಿಂದಿನ ರೈತನ ಚಟುವಟಿಕೆಗಳು, ಜಾನಪದ ಕಲೆ, ನೃತ್ಯ, ನಾಟಕಗಳು ಇವುಗಳನ್ನು ಮತ್ತೆ ಮತ್ತೆ ಅನುಷ್ಠಾನಗೊಳಿಸುವದರಿಂದ ನಾಡು, ದೇಶ ಶ್ರೀಮಂತವಾಗುವುದು ಎಂದು ಪ್ರಸ್ತುತ ಪರಿಸ್ಥಿತಿಯನ್ನು ಲಾವಣಿ ಮೂಲಕ ಹಾಡಿ ರಂಜಿಸಿದರು.
ಪ್ರಾ. ಎ.ಎಸ್.ಹಿಪ್ಪರಗಿಯವರು ವಿದ್ವಾಂಸರು, ವಿಮರ್ಶಕರು, ಸರಳವಾಗಿ ಬೋಧನೆ ಮಾಡುವವರು. ಅಂತವರು ಮಾಡಿದ ವಿದ್ಯಾರ್ಜನೆಯಿಂದ ವಿದ್ಯಾರ್ಥಿಗಳು ಈಗಲೂ ನೆನೆಸುತ್ತಾರೆಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಪಿ.ಟಿ.ಕೊಟ್ನಿಸ್ ವಹಿಸಿದ್ದರು. ಸಾಧಕರಾದ ಶಿವಾನಂದ ಜಂಗೀನಮಠ, ಡಾ. ಎಮ್.ಎಸ್.ತಿಮ್ಮಾಪುರ, ಶ್ರೀಮತಿ ಶಶಿಕಲಾ ಕೊಟಗಿಯವರನ್ನು ಮತ್ತು ಅತಿಥಿ, ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಡಾ. ಸುಭಾಸ ಕನ್ನೂರ ಕಾರ್ಯಕ್ರಮ ನಿರೂಪಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿದರು. ಎಸ್.ಎನ್.ಶಿವಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್.ಬಿ.ದೊಡಮನಿ ಸಾಧಕರನ್ನು ಪರಿಚಯಿಸಿದರು. ಪ್ರೊ. ದಿಕ್ಷಿತ್ ವಂದಿಸಿದರು. ಬಿ.ಕೆ.ಗೋಟ್ಯಾಳ, ಎಸ್.ಜಿ.ನಾಡಗೌಡ, ಜಿ.ಬಿ.ಸಾಲಕ್ಕಿ, ಎ.ಎಸ್.ಕಂಚ್ಯಾಣಿ, ಸುಭಾಸ ಯಾದವಾಡ, ಡಾ. ವಿ.ಎಂ.ಬಾಗಾಯತ, ಡಾ. ಕವಿತಾ ಹಿಪ್ಪರಗಿ, ಶಕುಂತಲಾ ದೊಡಮನಿ, ವಿದ್ಯಾವತಿ ಅಂಕಲಗಿ, ದೊಡ್ಡಣ್ಣ ಬಜಂತ್ರಿ, ಶ್ರೀಮತಿ ಸಲಗರ, ಸಾಂಗಲಿಕರ, ಎಂ.ಬಿ.ಕಟ್ಟಿಮನಿ, ಗಂಗಾಧರ ಯಳಗಂಟಿ ಮುಂತಾದವರು ಉಪಸ್ಥಿತರಿದ್ದರು.
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 