ಪಾದಯಾತ್ರೆಗಳಿಗೆ ತಂಪು ಪಾನೀಯ ವಿತರಣೆ
Cold drink distribution for hikers
ಪಾದಯಾತ್ರೆಗಳಿಗೆ ತಂಪು ಪಾನೀಯ ವಿತರಣೆ
ಕೊಪ್ಪಳ 23: ಲಿಂ.ಶಿವಶಾಂತವೀರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ನಿಮಿತ್ತ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾದಯಾತ್ರೆ ಶ್ರೀಮಳೆ ಮಲ್ಲೇಶ್ವರ ದೇವಸ್ಥಾನದಿಂದ ಗವಿಮಠದವರೆಗೆ ಅಪಾರ ಭಕ್ತಸ್ತೋಮದ ನಡುವೆ ಜರುಗಿತು.
ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾದಯಾತ್ರೆಗೆ ಭಕ್ತಾದಿಗಳು ಬೀದಿಗಳನ್ನು ಸ್ವಚ್ಛಗೊಳಿಸಿ ರಂಗೋಲಿ ಹೂಗಳಿಂದ ಅಲಂಕರಿಸಿದ್ದರು.ಸಪ್ತಲಿಂಗೇಶ್ವರ ದೇವಸ್ಥಾನ ಬಳಿ ಅರ್ಚಕರ ಪುರೋಹಿತರ ಸಂಘದ ವತಿಯಿಂದ ಪಾದಯಾತ್ರಿಗಳಿಗೆ ತಂಪು ಪಾನೀಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಜ್ಜಪ್ಪ ಸ್ವಾಮಿ ಚನ್ನವಡೆಯರಮಠ, ನಾಗರಾಜ್ ಕಂದಾರಿ, ರತನ್ ರಾಜಪುರೋಹಿತ್, ಓಂ ಪ್ರಕಾಶ್ ರಾಜಪುರೋಹಿತ್, ಶ್ರವಣ್ ಕುಮಾರ್ ಶರ್ಮಾ, ಇಂಜಿನಿಯರ್ ಸೋಮಲಿಂಗಪ್ಪ, ಮುತ್ತುಸ್ವಾಮಿ ನರೇಗಲ್ ಮಠ, ಮಾಂತೇಶ್ ಸುಂಕದ್, ಚನ್ನಬಸಯ್ಯ ಹಿರೇಮಠ್, ರುದ್ರಯ್ಯ ಸ್ವಾಮಿ ಚನ್ನ ವಡೆಯರಮಠ, ಶಾಂತವೀರಯ್ಯ ಹಿರೇಮಠ, ಸಿದ್ದಯ್ಯ ಹಿರೇಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 