ನಗರಸಭೆ ಅಧಿಕಾರಿಗಳು ತೆರವುಕಾರ್ಯಾಚರಣೆ
Clearance operation by municipal officials
ನಗರಸಭೆ ಅಧಿಕಾರಿಗಳು ತೆರವುಕಾರ್ಯಾಚರಣೆ
ಜಮಖಂಡಿ 05 : ಒತ್ತುವರಿ ಮಾಡಿಕೊಂಡಿದ್ದ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಜೆಸಿಬಿ ಮೂಲಕ ನಗರಸಭೆ ಅಧಿಕಾರಿಗಳು ತೆರವುಕಾರ್ಯಾಚರಣೆ ನಡೆಸಿದರು.
ನಗರದ ಭೂಮಿಕಾ ನಗರದಲ್ಲಿ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಒತ್ತುವರಿ ಮಾಡಿಕೊಂಡು ಮನೆ ಹಾಗೂ ಮನೆಯ ಕಂಪೌಂಡಗಳನ್ನು ನಿರ್ಮಿಸಿಕೊಂಡಿದ್ದರು. ಇದರಿಂದ ಮಳೆಗಾಲದಲ್ಲಿ ಹಳ್ಳದಲ್ಲಿನ ನೀರು ಸರಿಯಾಗಿ ಹರಿದು ಹೋಗದೆ ಅಲ್ಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಇದರಿಂದ ಹಳ್ಳದಲ್ಲಿನ ನೀರು ನಗರಸಭೆ ಉದ್ಯಾನವನ, ಖಾಲಿ ನಿವೇಶನಗಳಲ್ಲಿ ನೀರು ನುಗ್ಗುತ್ತಿತ್ತು. ಜೆಸಿಬಿ ಮೂಲಕ ಹಲವಾರು ಮನೆಗಳ ಕಂಪೌಂಡ್, ಮನೆಗಳನ್ನು ತೆರವುಗೊಳಿಸಿದರು.ಹಳ್ಳದ ತೆರವು ಕಾರ್ಯಾಚರಣೆಯಲ್ಲಿ ಯಾವುದೇ ತರಹ ಒತ್ತಡಕ್ಕೆ ಮನೆಯದೆ ನ್ಯಾಯಯುತವಾಗಿ ಕಾರ್ಯಾಚರಣೆ ನಡೆಸಬೇಕು, ಇದರಲ್ಲಿ ಯಾರದರೆ ಹಿತಾಸಕ್ತಿಗೆ ಒಳಗಾದರೆ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಎಚ್ಚರಿಕೆ ನೀಡಿದರು.ಅಮೃತ ನಗರೋಥ್ಥಾನ ಯೋಜನೆ ಅಡಿ 1, 5 ಕೋಟಿ ರೂ, ವೆಚ್ಚದಲ್ಲಿ ಲಂಡ್ಯಾನ ಹಳ್ಳವನ್ನು (ಗೋರನ್ನ ಹಳ್ಳ) ಅಭಿವೃದ್ದಿ ಪಡಿಸಲಾಗುತ್ತಿದೆ, ಅಕ್ರಮ ಒತ್ತುವರಿಯನ್ನು ತೆರವು ಮಾಡಿಕೊಳ್ಳವಂತೆ ಅಲ್ಲಿನ ನಿವಾಸಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿದೆ ಅದರಂತೆ ತೆರವು ಮಾಡಲಾಗುತ್ತಿದೆ ಎಂದು ಪೌರಾಯುಕ್ತ ಜ್ಯೋತಿ ಗೀರೀಶ ತಿಳಿಸಿದರು.ಈ ಸಂದರ್ಭದಲ್ಲಿ ಸುಭಾಸ ಚೌಗಲಾ, ಯಲ್ಲಪ್ಪ ಬಿದರಿ ಸೇರಿದಂತೆ ಅನೇಕರು ಇದ್ದರು.ಪೋಟೋ: ಜಮಖಂಡಿ ನಗರದ ಭೂಮಿಕಾ ನಗರದಲ್ಲಿನ ಲಂಡ್ಯಾನ ಹಳ್ಳದ ಒತ್ತುವರಿಯನ್ನು ನಗರಸಬೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 