ಮಕ್ಕಳು ಶಿಕ್ಷಣವಂತರಾಗಬೇಕು: ಗುರುದೇವಿ ಹುಲಿಗೆಪ್ಪನವರಮಠ
Children should become educated: Gurudevi Huligeppanavaramath
ಯರಗಟ್ಟಿ 11: ಮಕ್ಕಳು ಶಿಸ್ತು, ಸ್ವಪ್ರಯತ್ನ ಮತ್ತು ಉತ್ತಮ ನಡವಳಿಕೆಯೊಂದಿಗೆ ಶಿಕ್ಷಣವಂತರಾಗಬೇಕು. ಪೋಷಕರು ಪ್ರೀತಿಯಿಂದ ಮಾರ್ಗದರ್ಶನ ನೀಡಿ, ಅವರಲ್ಲಿ ಜವಾಬ್ದಾರಿ, ಕೌಶಲ್ಯ ಮತ್ತು ಆತ್ಮವಿಶ್ವಾಸ ಬೆಳೆಸಬೇಕು ಎಂದು ಗುರುದೇವಿ ಹುಲಿಗೆಪ್ಪನವರಮಠ ಹೇಳಿದರು.ಪಟ್ಟಣದ ಪೃಥ್ವಿ ಸೆಂಟ್ರಲ್ ಸ್ಕೂಲ್ ನಲ್ಲಿ ಹಮ್ಮಿಕೊಂಡ ಶಾಲಾ ವಾರ್ಷಿಕೋತ್ಸವ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ, ಸಾಂಪ್ರದಾಯಿಕ ಇತಿಹಾಸ ನಿರ್ಮಿಸಿದ ಕ್ಷೇತ್ರವಾಗಿದೆಶಿಕ್ಷಣ ಸಂಸ್ಥೆಯಲ್ಲಿ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶಿಕ್ಷಣ ಜೀವನದಲ್ಲಿ ಬಹಳಷ್ಟು ಮುಖ್ಯ. ಶಿಕ್ಷಣ ಮತ್ತು ಜ್ಞಾನಕ್ಕೆ ಬೆಲೆ ಇದೆ. ನಮ್ಮ ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ, ಶಿಕ್ಷಣಕ್ಕಾಗಿ ಪಣತೊಟ್ಟಿದೆ. ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಿ ಸರ್ಕಾರದ ಸೌಲಭ್ಯ ಪಡೆಯುವ ಮೂಲಕ ಜೀವನ ನಿರ್ವಹಣೆ ಸಾದ್ಯವಿದೆ ಎಂದರು.ಈ ವೇಳೆ ಕೆ.ಎಂ.ಎಫ್ ನಿರ್ದೇಶಕ ಅಜೀತಕುಮಾರ ದೇಸಾಯಿ, ಉದ್ಯೆಮಿ ರಾಜೇಂದ್ರ ಶೆಟ್ಟಿ, ಮಂಜುನಾಥ ಹುಂಡೇಕಾರ, ಶಿವಾಪೂರ ಶಾಲಾ ಪ್ರಧಾನ ಗುರುಗಳಾದ ಮಂಜುನಾಥ ಕುಡ್ಲಿಂಗಪ್ಪಗೋಳ, ಸಮಾಜಸೇವಕಿ ದೀಪಾ ಸಂಗಪ್ಪನವರ, ಹನಮಂತ ಭೂಮನ್ನವರ, ಮಂಜುನಾಥ ಗೌಡರ, ಪ್ರಗತಿಪರ ರೈತರಾದ ಪ್ರವೀಣ ಬಿಷ್ಟನ್ನವರ, ರವಿ ಸಣ್ಣಗೌಡರ, ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀ ಕಳ್ಳಿಗುದ್ದಿ, ಸಾಹಿತಿ ಡಾ. ರಾಜಶೇಖರ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕ ಶಿವಪ್ರಕಾಶ ಪಾಟೀಲ,ಡಾ. ಕಾರ್ತಿಕ ವಾಲಿ, ಶಾಲೆಯ ಮುಖ್ಯೋಪಾದ್ಯ ಬಸನಗೌಡ ಅಣ್ಣಿಗೇರಿ ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿಗಳು ಹಾಗೂ ಮಕ್ಕಳ ಪಾಲಕರು, ಶಿಕ್ಷಣ ಪ್ರೇಮಿಗಳು ಇದ್ದರು.
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು
6.85 ಕೆ.ಜಿ. ಗಾಂಜಾ ಮಿಶ್ರಿತ ಚಾಕಲೇಟ್ ಪ್ಯಾಕೆಟ್ಗಳ ವಶ: ಓರ್ವ ಆರೋಪಿ ಬಂಧನ
ಕಳೆದುಹೋಗಿದ್ದ 57 ಮೊಬೈಲ್ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ: ವಾರಸುದಾರರಿಗೆ ವಾಪಸ್
ಬಹುಕೋಟಿ ವಂಚನೆ : ನೀಲಣ್ಣವರ, ಪತ್ನಿ ಸೇರಿ ಆಪ್ತರ ಕಚೇರಿ, ನಿವಾಸಗಳ ಮೇಲೆ ಇಡಿ ದಾಳಿ 