ಶೇಡಬಾಳದಲ್ಲಿ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಜಯಂತಿ
Chhatrapati Shivaji Jayanti was celebrated lavishly in Shedabala
ಶೇಡಬಾಳದಲ್ಲಿ ಅದ್ದೂರಿಯಾಗಿ ಛತ್ರಪತಿ ಶಿವಾಜಿ ಜಯಂತಿ
ಕಾಗವಾಡ 19 : ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಬುಧವಾರ ದಿ. 19 ರಂದು ಹಿಂದವಿ ಸಾರ್ಮಾಜ್ಯದ ಸ್ಥಾಪಕ ಹಿಂದೂಗಳ ಆರಾಧ್ಯ ಯುಗಪುರುಷ ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಟ್ಟಣ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮತ್ತು ಪಟ್ಟಣದ ಗಣ್ಯರು ಸೇರಿ ಪಟ್ಟಣದ ಪ್ರಮುಖ ಬಸವೇಶ್ವರ ದೇವಸ್ಥಾನದ ಬಳಿಯ ವೃತ್ತಕ್ಕೆ ಛತ್ರಪತಿ ಶಿವಾಜಿ ಮಹಾರಾಜ ವೃತ್ತವೆಂದು ನಾಮಕರಣ ಮಾಡಿ, ಹಿರಿಯರು ಗಣ್ಯರು ಮಕ್ಕಳು ಸೇರಿ ಶಿವಾಜಿ ಮಹಾರಾಜರ ಜಯಂತಿಯನ್ನು ಆಚರಿಸಿದರು. ನೂತನ ವೃತದ ಫಲಕವನ್ನು ಮುಖಂಡರಾದ ವಿನೋದ ಬರಗಾಲೆ ಕುಮಾರ ಮಾಲಗಾಂವೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಪ.ಪಂ. ಅಧ್ಯಕ್ಷ ಉತ್ಕರ್ಷ ಪಾಟೀಲ ನಾಮದೇವ ಹೊನಕಾಂಬಳೆ ಸದಸ್ಯರಾದ ಬಾಬಾಸಾಬ ಮೇಸ್ತ್ರಿ ಸಚೀನ ಜಗತಾಪ, ರಾಜೇಂದ್ರ ಚೌಗುಲೆ ಪ್ರಕಾಶ ಮಾಳಿ ವಿಜಯ ಶಿಂಧೆ ಶಿವ ಪ್ರೇಮಿ ಗ್ರೂಪ್ನ ವಸಂತ ಶಿಂಧೆ ಸದಾಶಿವ ನಿಕ್ಕಂ ಅಮೀತ ಜಾಧವ ಅನೀಲ ಖಾಂಡೆ ಅಜೀತ ಜಾಧವ ಸಂಭಾ ಚವ್ಹಾನ ಚಂದ್ರಕಾಂತ ಜಾಧವ ಸಚೀನ ಲಾಳಗೆ ಉಮೇಶ ಶಿಂಧೆ ಪ್ರಕಾಶ ನಿಕ್ಕಂ ಚೇತನ ಕುಡಚೆ ಉದಯ ಸವದತ್ತಿ ಕುಮಾರ ಶಿಂಧೆ ಸೇರಿದಂತೆ ನೂರಾರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 