ಛತ್ರಪತಿ ಶಿವಾಜಿ ಜಯಂತಿ ಆಚರಣೆ
ಲೋಕದರ್ಶನ ವರದಿ
ಕಾಗವಾಡ:ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ಯ ಉಗಾರ ಖುರ್ದ ಪಟ್ಟಣದಲ್ಲಿ ಮಹಾರಾಜರ ಪ್ರತಿಮೆಯ ಭವ್ಯ ಮೆರವಣಿಗೆ ಜರುಗಿತು.
ಉಗಾರದ ಡಾ. ಜೋಗ ವೃತ್ತದಿಂದ ಛತ್ರಪತಿ ಪ್ರತಿಮೆಗೆ ಸಮಾಜದ ಹಿರಿಯರಾದ ಮಾರುತಿ ದೇಸಾಯಿ ಪೂಜೆ ಸಲ್ಲಿಸಿದರು. ಎಲ್ಲ ಪುರಸಭೆ ಸದಸ್ಯರು, ಮರಾಠಾ ಮಂಡಳದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು. ಜಿಜಾವು ಮಹಿಳಾ ಮಂಡಳದ ಕಾರ್ಯಕರ್ತರು, ಫೇಟಾ ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ಎಲ್ಲೆಡೆ 'ಜಯ ಶಿವಾಜಿ, ಜಯ ಭವಾನಿ' ಸ್ವರಣಾದ ಕೇಳಿ ಬರುತ್ತಿತ್ತು. ಬೆಳಿಗ್ಗೆ ಪಟ್ಟಣದ ಮರಾಠಾ ಮತ್ತು ಇತರ ಸಮಾಜದ ಮಹಿಳೆಯರು ಛತ್ರಪತಿ ಶಿವಾಜಿ ಮಹಾರಾಜರ ತೋಟ್ಟಲ ತೂಗುವ್ ಕಾರ್ಯಕ್ರಮ ನೇರವೆರಿಸಿ, ಪಲ್ಲಕ್ಕಿದೊಂದಿಗೆ ಸುಮಂಗಲಿಯರು ಕೃಷ್ಣಾ ನದಿಗೆ ತರಳಿ ಜಲ ಕುಂಭಗಳನ್ನು ತೆಗೆದುಕೊಂಡು ಲಕ್ಷ್ಮೀ ಮಂದಿರ ಹತ್ತಿರದ ಶಿವತಿರ್ಥ ಮಹಾರಾಜರ ಪುತ್ತಳಿಗೆ ಜಲಾಭಿಷೇಕ ಮಾಡಿದರು.
ಮಿರಜದ ಖ್ಯಾತ ಢೋಲ ತಾಷಾ 25 ಜನರ ವಿಶೇಷ ಪಥಕದ ದೃಶ್ಯ ಕಾಣಲು ಅನೇಕರು ಪಾಲ್ಗೊಂಡಿದ್ದರು. ಸುಮಾರು 5 ಗಂಟೆ ಕಾಲ ಮೆರವಣಿಗೆ ನೆರವೇರಿತು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 