ಶಾಲು, ಮಾಲೆ ಬದಲು ಪುಸ್ತಕ, ಪೆನ್ನು, ನೋಟಬುಕ್ಕ ತನ್ನಿರಿ : ಖಾದ್ರಿ
Bring book, pen, notebook instead of shawl, garland : Qadri
ಶಾಲು, ಮಾಲೆ ಬದಲು ಪುಸ್ತಕ, ಪೆನ್ನು, ನೋಟಬುಕ್ಕ ತನ್ನಿರಿ : ಖಾದ್ರಿ
ಶಿಗ್ಗಾವಿ 03 : ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ಸನ್ಮಾನಕ್ಕೆ ತರುವ ಬದಲಾಗಿ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಟ್ಟರೇ ನಾನು ನಿಮ್ಮ ಹೆಸರಿನಲ್ಲಿ ತಾಲೂಕಿನ ಬಡಮಕ್ಕಳಿಗೆ ವಿತರಿಸುತ್ತೇನೆ ಎಂದು ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ ಹೇಳಿದರು.
ತಾಲೂಕಿನ ಹುಲಗೂರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನನ್ನ ಅಭಿಮಾನಿಗಳು ಅಥವಾ ಮುಖಂಡರು, ಕಾರ್ಯಕರ್ತರು ಶುಭ ಹಾರೈಸಲು ಬರುವಾಗ ಶಾಲು, ಮಾಲೆ, ಪೋಟೋ ಪ್ರೇಮ, ಸ್ವೀಟ ತಂದು ಅನಾವಶ್ಯಕವಾಗಿ ಹಣ ವ್ಯಯ ಮಾಡುವ ಬದಲಾಗಿ ಮಕ್ಕಳ ವಿಧ್ಯಾಭ್ಯಾಸಕ್ಕೆ ಪುಸ್ತಕ, ಪೆನ್ನು, ನೋಟಬುಕ್ಕ ತಂದು ಕೊಡಿ ಅವುಗಳನ್ನು ನಮ್ಮ ಕ್ಷೇತ್ರದ ಬಡವ, ದಿನದಲಿತ, ಅಲೇಮಾರಿ ಮಕ್ಕಳಿಗೆ ನಿಮ್ಮ ಹೆಸರು ಹೇಳುವುದರ ಮೂಲಕ ವಿತರಿಸುತ್ತೇನೆ ಎಂದರು.
ಖಾದ್ರಿಯವರಿಗೆ ಸನ್ಮಾನಿಸಲು ಹೋದಾಗ ಶಾಲು, ಮಾಲೆ ಬದಲಾಗಿ ನೋಟಬುಕ್ಕ ಕೊಟ್ಟು ಹಾವೇರಿ ಜಿಲ್ಲೆ ವಕ್ಪ ಬೋರ್ಡ ಸದಸ್ಯ ಮಹ್ಮದಹನೀಫ ಅಂಬೂರ ನೇತೃತ್ವದಲ್ಲಿ ಸನ್ಮಾನಿಸಿದರು. ಅಬ್ದುಲ್ ಜಲೀಲ, ಮಹ್ಮದ ಹಸನೇನ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 