ಬಾಜಿರಾವ ಮಗದುಮ್ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ

Bajirao Magadum High School Annual Friendship Conference

ಬಾಜಿರಾವ ಮಗದುಮ್ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ 

ರಾಯಬಾಗ, 06; ವಿದ್ಯಾರ್ಥಿಗಳು ವ್ಯರ್ಥ ಕಾಲ ಕಳೆಯದೇ ಶಾಲೆಯಲ್ಲಿ ಗುರುಗಳು ಹೇಳಿದ ಅಭ್ಯಾಸವನ್ನು ಅಂದಿನ ದಿನವೇ ಮಾಡಿದರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದಾಗಿದೆ ಎಂದು ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈರಗೌಡಾ ಪಾಟೀಲ ಹೇಳಿದರು.     ಬುಧವಾರ ತಾಲೂಕಿನ ಬಾವಾನಸೌದತ್ತಿಯ ಬಾಜಿರಾವ ಮಗದುಮ್ ಪ್ರೌಢಶಾಲೆಯ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ,  ಎಸ್‌.ಎಸ್‌.ಎಲ್‌.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಬಹುಮಾನ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಏಕಾಗ್ರತೆ, ಕಠಿಣ ಪರಿಶ್ರಮ  ಹಾಗೂ ಸತತ ಅಧ್ಯಯನದಿಂದ ಸಾಧನೆ ಮಾಡಲು ಸಾಧ್ಯವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

        ಅತಿಥಿಗಳಾಗಿ ಆಗಮಿಸಿದ್ದ  ಶಿರಗುಪ್ಪಿಯ ಸಿದ್ದೇಶ್ವರ ವಿದ್ಯಾಲಯದ ಕನ್ನಡ ಅಧ್ಯಾಪಕ ಎ.ಎಸ್‌.ಪಾಟೀಲ ಮಾತನಾಡಿ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ನಡತೆ, ಒಳ್ಳೆಯ ವಿಚಾರಗಳು, ಸತತ ಪರಿಶ್ರಮ, ಎಲ್ಲರನ್ನೂ ಗೌರವಿಸುವ ಮನೋಭಾವನೆಗಳನ್ನು ಬೆಳೆಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.     ಸಂಸ್ಥೆಯ ಉಪಾಧ್ಯಕ್ಷ ಜೆ.ಎಮ್‌.ಮಗದುಮ್, ಅಜಿತ ಕಾಮಗೌಡ, ಬಾಬು ಜನಾಜ, ಕುಮಾರ ಕಾಮಗೌಡ, ಅರಿಹಂತ ಕಾಮಗೌಡ, ಆರ್‌.ಎನ್‌.ಪಾಟೀಲ, ಧೂಳಗೌಡ ಪಾಟೀಲ, ಬಿ.ಎಸ್‌.ಪಾಟೀಲ, ಎ.ಕೆ.ಸಲಗರೆ, ಮೇಘಾ ಹಿರೇಕುಡಿ, ಸಾವಿತ್ರಿ ಗಂಗಾಯಿ ಹಾಗೂ ವಿದ್ಯಾರ್ಥಿಗಳು ಇದ್ದರು.