ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಸ್ಪಷ್ಟ ಬಹುಮತ: ರಮೇಶ ಜಾರಕೀಹೋಳಿ
ಸಂಬರಗಿ, 04 : ಕಾಂಗ್ರೇಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳಿಂದ ಹಲವಾರು ಅಭಿವೃದ್ದಿರಿ ಕಾಮಗಾರಿಗಳು ಕುಂಟಿತಗೊಂಡಿವೆ. ನಾವು ವಿರೋಧ ಪಕ್ಷದಲ್ಲಿ ಇದ್ದು, ಅವರು ಮಾಡುವ ಅಭಿವೃದ್ಧಿಗೆ ಸಹಕಾರ ನೀಡುತ್ತೇವೆಂದು ಮಾಜಿ ಸಚಿವರು, ಹಾಲಿ ಶಾಸಕರು ರಮೇಶ ಜಾರಕೀಹೋಳಿ ಹೇಳಿದರು.
ಖಿಳೇಗಾಂವ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ ಅವರು ಮುಂಬರುವ ಚುನಾವಣೆಯಲ್ಲಿ ಜನರು ಅವರಿಗೆ ತಕ್ಕ ಪಾಠ ನೀಡುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿ.ಜೆ.ಪಿ ಸ್ಪಷ್ಟ ಬಹುಮತದಿಂದ ಅಧಿಕಾರ ಚುಕ್ಕಣಿ ಹಿಡಿದೇ ತೀರುತ್ತೇವೆಂಬ ವಿಶ್ವಾಸ ವ್ಯಕ್ತಪಡಿಸಿದರು.
ಆಲಮಟ್ಟಿ ಜಲಾಶಯದ ಎತ್ತರ ಮಾಡಿದರೆ ನಮಗೆ ಮಹಾಪೂರ ಬರುತ್ತದೆ ಎಂದು ಮಹಾರಾಷ್ಟ್ರ ಖ್ಯಾತೆ ತೆಗೆದಿದೆ, ಈ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಿ ನಾವು ವಿರೋಧ ಪಕ್ಷದಲ್ಲಿ ಇದ್ದರೂ ಸಹ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಈ ಕುರಿತು ತೆಗೆದುಕೊಳ್ಳುವ ತೀರ್ಮಾಣಕ್ಕೆ ಬದ್ಧವಾಗಿದ್ದು, ಆಲಮಟ್ಟಿ ಜಲಾಶಯ ಹಿನ್ನೀರಿನಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮಹಾರಾಷ್ಟ್ರ ಸರ್ಕಾರ ತಮ್ಮ ಪ್ರಾಧಿಕೃತ ಕುರಿತು ಮಾತನಾಡುತ್ತಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಸಚಿವರಾದ ಶ್ರೀಮಂತ ಪಾಟೀಲ, ಮಾಜಿ ಶಾಸಕರು ಮಹೇಶ ಕುಮಟಳ್ಳಿ, ಆರ್.ಎಸ್.ಪಿ ಉದ್ಯೋಗ ಸಮುಹ ಸಂಸ್ಥಾಪಕ ಅಧ್ಯಕ್ಷ ರವಿ ಪೂಜಾರಿ, ಬಸವೇಶ್ವರ ದೇವಸ್ಥಾನ ಕಮೀಟಿ ಚೇರ್ಮನ್ರಾದ ಸತೀಶ ಹೊನ್ನಾವಗೋಳ, ಎಸ್.ಎಲ್ ಬಗಲಿ ಟೆಕ್ಸಟೈಲ್ ವ್ಯವಸ್ಥಾಪಕರಾದ ಪ್ರಶಾಂತ ಬಗಲಿ, ಧರೆಪ್ಪಾ ಹೊನ್ನಾಗೋಳ, ಗಣೇಶ ನಾಗಗೋಳ, ರವಿ ನಾಗಗೋಳ, ವಿಜಯ ಗುರುಪಾದಗೋಳ, ನಾನಾಸಾಹೇಬ ಅವತಾಡೆ, ಸಿದ್ದು ಪಾಟೀಲ, ಮಲ್ಲಿಕಾರ್ಜುನ ಅಂದಾನಿ ಇನ್ನೀತರು ಉಪಸ್ಥಿತರಿದ್ದರು.