ಸಂತ್ರಸ್ತರಿಗೆ ನೆರವು: ತಾಲೂಕಾಡಳಿತಕ್ಕೆ ದಿನಬಳಕೆಯ ವಸ್ತುಗಳನ್ನು ಹಸ್ತಾಂತರ
ಲೋಕದರ್ಶನ ವರದಿ
ಮುದಗಲ್ಲ 19: ಪಟ್ಟಣ ಸಮೀಪದ ಹಡಗಲಿ ಮತ್ತು ತುರಡಗಿ ಗ್ರಾಮಸ್ಥರು ನೆರೆಸಂತ್ರಸ್ತರಿಗಾಗಿ ಸಂಗ್ರಹಿಸಿದ್ದ ದಿನಬಳಕೆಯ ಅಗತ್ಯವಸ್ತುಗಳನ್ನು ಲಿಂಗಸುಗೂರ ತಾಲೂಕಾಡಳಿತಕ್ಕೆ ಶುಕ್ರವಾರ ಹಸ್ತಾಂತರಿಸಿದರು.
ಹಡಗಲಿ ಗ್ರಾಮಸ್ಥರು ಸಾವಿರ ರೊಟ್ಟಿ, ಸೀರೆ, ದೋತ್ರಾ, ಶರ್ಟ,ಅಕ್ಕಿ, ಹುಣಸೆಚಟ್ನಿ, ಮಾವಿನ ಚಟ್ಟಿ, ಖಾರದ ಪುಡಿ, ತೊಗರಿ ಬೆಳೆ, ಬಿಸ್ಕೇಟ್ ಬಾಕ್ಸ್, ಬ್ರೇಡ್ ಬಾಕ್ಸ್ಗಳನ್ನು ಸಂಗ್ರಹಿಸಿ ಲಿಂಗಸುಗೂರಿನ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರದ ನೋಡಲ್ ಅಧಿಕಾರಿ ರಾಚಪ್ಪವರಿಗೆ ಹಸ್ತಾಂತರಿಸಿದರು. ಶರಣಬಸವ ಹಡಗಲಿ, ಶೇಖರಗೌಡ ಮಾಲಿಪಾಟೀಲ್, ಶಿವುಕುಮಾರ ಹಡಗಲಿ, ಶರಣಬಸವ, ಹನುಮಂತ ಸೇರಿದಂತೆ ಗ್ರಾಮದ ಯುವಕರು ಇದ್ದರು.
ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್ ತುರಡಗಿ ಇಲ್ಲಿನ ಗ್ರಾಮಸ್ಥರು ಸಂಗ್ರಹಿಸಿದ್ದ ದವಸ ಧಾನ್ಯಗಳನ್ನು, ಬಟ್ಟೆ, ಕಾಳು, ರೊಟ್ಟಿ, ಅಕ್ಕಿ ಸೇರಿದಂತೆ ಗೋವಿಗಳಿಗೆ ಮೇವುಗಳನ್ನು ತಶೀಲ್ದಾರ ಚಾಮರಾಜ ಪಾಟೀಲರಿಗೆ ನೀಡಿದರು. ನೋಡಲ್ಅಧಿಕಾರಿ ಡಾ| ರಾಚಪ್ಪ, ಮಾನಪ್ಪ ಆಶಿಹಾಳ ತಾಂಡಾ ಸೇರಿದಂತೆ ಅನೇಕರು ಇದ್ದರು.
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 