ಸಂತ್ರಸ್ತರಿಗೆ ನೆರವು: ತಾಲೂಕಾಡಳಿತಕ್ಕೆ ದಿನಬಳಕೆಯ ವಸ್ತುಗಳನ್ನು ಹಸ್ತಾಂತರ
ಲೋಕದರ್ಶನ ವರದಿ
ಮುದಗಲ್ಲ 19: ಪಟ್ಟಣ ಸಮೀಪದ ಹಡಗಲಿ ಮತ್ತು ತುರಡಗಿ ಗ್ರಾಮಸ್ಥರು ನೆರೆಸಂತ್ರಸ್ತರಿಗಾಗಿ ಸಂಗ್ರಹಿಸಿದ್ದ ದಿನಬಳಕೆಯ ಅಗತ್ಯವಸ್ತುಗಳನ್ನು ಲಿಂಗಸುಗೂರ ತಾಲೂಕಾಡಳಿತಕ್ಕೆ ಶುಕ್ರವಾರ ಹಸ್ತಾಂತರಿಸಿದರು.
ಹಡಗಲಿ ಗ್ರಾಮಸ್ಥರು ಸಾವಿರ ರೊಟ್ಟಿ, ಸೀರೆ, ದೋತ್ರಾ, ಶರ್ಟ,ಅಕ್ಕಿ, ಹುಣಸೆಚಟ್ನಿ, ಮಾವಿನ ಚಟ್ಟಿ, ಖಾರದ ಪುಡಿ, ತೊಗರಿ ಬೆಳೆ, ಬಿಸ್ಕೇಟ್ ಬಾಕ್ಸ್, ಬ್ರೇಡ್ ಬಾಕ್ಸ್ಗಳನ್ನು ಸಂಗ್ರಹಿಸಿ ಲಿಂಗಸುಗೂರಿನ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರದ ನೋಡಲ್ ಅಧಿಕಾರಿ ರಾಚಪ್ಪವರಿಗೆ ಹಸ್ತಾಂತರಿಸಿದರು. ಶರಣಬಸವ ಹಡಗಲಿ, ಶೇಖರಗೌಡ ಮಾಲಿಪಾಟೀಲ್, ಶಿವುಕುಮಾರ ಹಡಗಲಿ, ಶರಣಬಸವ, ಹನುಮಂತ ಸೇರಿದಂತೆ ಗ್ರಾಮದ ಯುವಕರು ಇದ್ದರು.
ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್ ತುರಡಗಿ ಇಲ್ಲಿನ ಗ್ರಾಮಸ್ಥರು ಸಂಗ್ರಹಿಸಿದ್ದ ದವಸ ಧಾನ್ಯಗಳನ್ನು, ಬಟ್ಟೆ, ಕಾಳು, ರೊಟ್ಟಿ, ಅಕ್ಕಿ ಸೇರಿದಂತೆ ಗೋವಿಗಳಿಗೆ ಮೇವುಗಳನ್ನು ತಶೀಲ್ದಾರ ಚಾಮರಾಜ ಪಾಟೀಲರಿಗೆ ನೀಡಿದರು. ನೋಡಲ್ಅಧಿಕಾರಿ ಡಾ| ರಾಚಪ್ಪ, ಮಾನಪ್ಪ ಆಶಿಹಾಳ ತಾಂಡಾ ಸೇರಿದಂತೆ ಅನೇಕರು ಇದ್ದರು.
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು
ಗಗನಯಾನ ಮಿಷನ್ಗಾಗಿ ಮಹತ್ವದ ಪ್ಯಾರಾಶೂಟ್ ಏರ್ಡ್ರಾಪ್ ಪರೀಕ್ಷೆಯನ್ನು ಇಸ್ರೋ ಯಶಸ್ವಿಯಾಗಿ ನಡೆಸಿತು 