ಸಂತ್ರಸ್ತರಿಗೆ ನೆರವು: ತಾಲೂಕಾಡಳಿತಕ್ಕೆ ದಿನಬಳಕೆಯ ವಸ್ತುಗಳನ್ನು ಹಸ್ತಾಂತರ
ಲೋಕದರ್ಶನ ವರದಿ
ಮುದಗಲ್ಲ 19: ಪಟ್ಟಣ ಸಮೀಪದ ಹಡಗಲಿ ಮತ್ತು ತುರಡಗಿ ಗ್ರಾಮಸ್ಥರು ನೆರೆಸಂತ್ರಸ್ತರಿಗಾಗಿ ಸಂಗ್ರಹಿಸಿದ್ದ ದಿನಬಳಕೆಯ ಅಗತ್ಯವಸ್ತುಗಳನ್ನು ಲಿಂಗಸುಗೂರ ತಾಲೂಕಾಡಳಿತಕ್ಕೆ ಶುಕ್ರವಾರ ಹಸ್ತಾಂತರಿಸಿದರು.
ಹಡಗಲಿ ಗ್ರಾಮಸ್ಥರು ಸಾವಿರ ರೊಟ್ಟಿ, ಸೀರೆ, ದೋತ್ರಾ, ಶರ್ಟ,ಅಕ್ಕಿ, ಹುಣಸೆಚಟ್ನಿ, ಮಾವಿನ ಚಟ್ಟಿ, ಖಾರದ ಪುಡಿ, ತೊಗರಿ ಬೆಳೆ, ಬಿಸ್ಕೇಟ್ ಬಾಕ್ಸ್, ಬ್ರೇಡ್ ಬಾಕ್ಸ್ಗಳನ್ನು ಸಂಗ್ರಹಿಸಿ ಲಿಂಗಸುಗೂರಿನ ಪರಿಹಾರ ಸಾಮಗ್ರಿ ಸಂಗ್ರಹ ಕೇಂದ್ರದ ನೋಡಲ್ ಅಧಿಕಾರಿ ರಾಚಪ್ಪವರಿಗೆ ಹಸ್ತಾಂತರಿಸಿದರು. ಶರಣಬಸವ ಹಡಗಲಿ, ಶೇಖರಗೌಡ ಮಾಲಿಪಾಟೀಲ್, ಶಿವುಕುಮಾರ ಹಡಗಲಿ, ಶರಣಬಸವ, ಹನುಮಂತ ಸೇರಿದಂತೆ ಗ್ರಾಮದ ಯುವಕರು ಇದ್ದರು.
ತಾಪಂ ಮಾಜಿ ಅಧ್ಯಕ್ಷ ರುದ್ರಗೌಡ ಪಾಟೀಲ್ ತುರಡಗಿ ಇಲ್ಲಿನ ಗ್ರಾಮಸ್ಥರು ಸಂಗ್ರಹಿಸಿದ್ದ ದವಸ ಧಾನ್ಯಗಳನ್ನು, ಬಟ್ಟೆ, ಕಾಳು, ರೊಟ್ಟಿ, ಅಕ್ಕಿ ಸೇರಿದಂತೆ ಗೋವಿಗಳಿಗೆ ಮೇವುಗಳನ್ನು ತಶೀಲ್ದಾರ ಚಾಮರಾಜ ಪಾಟೀಲರಿಗೆ ನೀಡಿದರು. ನೋಡಲ್ಅಧಿಕಾರಿ ಡಾ| ರಾಚಪ್ಪ, ಮಾನಪ್ಪ ಆಶಿಹಾಳ ತಾಂಡಾ ಸೇರಿದಂತೆ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 