ಟಿಬೆಟ್ ಕ್ಯಾಂಪಿನಲ್ಲಿ ದಲೈ ಲಾಮಾ ಆಶೀರ್ವಾದ ಪಡೆದ ಆರಿ​‍್ವ. ದೇಶಪಾಂಡೆ

ಟಿಬೆಟ್ ಕ್ಯಾಂಪಿನಲ್ಲಿ ದಲೈ ಲಾಮಾ ಆಶೀರ್ವಾದ ಪಡೆದ ಆರಿ​‍್ವ. ದೇಶಪಾಂಡೆ Ariva Deshpande receives blessings from the Dalai Lama at the Tibet camp

 

ಮುಂಡಗೋಡ 26 : ನೊಬೆಲ್ ಶಾಂತಿ ಪುರಸ್ಕೃತ ಹಾಗೂ ಟಿಬೆಟಿಯನ್ನರ ಪರಮೋಚ್ಚ ಧರ್ಮಗುರುಗಳಾದ ಪೂಜ್ಯ ದಲೈ ಲಾಮ ಅವರು ಡಿಸೆಂಬರ್ 12 ರಂದು ಮುಂಡಗೋಡ ತಾಲೂಕಿನ ಟಿಬೆಟ್ ಕ್ಯಾಂಪ್ಗೆ ಆಗಮಿಸಿರುವ ಹಿನ್ನೆಲೆಯಲ್ಲಿ, ಹಳಿಯಾಳ ಶಾಸಕ ಹಾಗೂ ರಾಜ್ಯ ಸರ್ಕಾರದ ಸುಧಾರಣಾ ಸಮಿತಿ ಆರೋಗ್ಯದ ಅಧ್ಯಕ್ಷರಾದ ಆರಿ​‍್ವ. ದೇಶಪಾಂಡೆ ಅವರು ಗುರುವಾರ ಡ್ರೀಪುಂಗ್ ತಾಶಿ ಗೋಮಾಂಗ ಬೌದ್ಧ ಮಂದಿರಕ್ಕೆ ಭೇಟಿ ನೀಡಿ ದಲೈ ಲಾಮ ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಈ ವೇಳೆ ಮಾಜಿ ಶಾಸಕ ವಿ.ಎಸ್‌. ಪಾಟೀಲ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್‌.ಎಂ. ನಾಯಕ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎನ್‌. ದುಂಡಶಿ, ಸಿಪಿಐ ರಂಗನಾಥ ನಿಲಮ್ಮನವರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.