ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ
Annotsava attracted attention in the ground of CTE institution
ಸಿಟಿಇ ಸಂಸ್ಥೆಯ ಮೈದಾನದಲ್ಲಿ ಗಮನ ಸೆಳೆದ ಅನ್ನೋತ್ಸವ
ಚಿಕ್ಕೋಡಿ 11: ಚಿಕ್ಕೋಡಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿಟಿಇ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ ಅನ್ನೋತ್ಸವ ವಿವಿಧ ಬಗೆ ಬಗೆ ಖಾದ್ಯಗಳ ಘಮಲ ಘಮ್ಮೇಂದು ಪರಿಮಳ ಪಸರಿಸಿದವು.
ಆಹಾರ ಮೇಳದಲ್ಲಿ ಉತ್ತರ ಕರ್ನಾಟಕ ಗಿರಮಿಟ್, ಮಿರ್ಚಿ ಬಜಿ, ತುಪ್ಪ ಸವರಿದ ಶೇಂಗಾ ಹೋಳಿಗೆ, ಸಜ್ಜಿ ರೋಟ್ಟಿ, ಜುನಕಾ, ಪಾನಿ ಪುರಿ, ದಾಬೇಲಿ, ಬೆಣ್ಣೆ ದೋಸಾ, ಸಮೋಸಾ ಸೇರಿದಂತೆ ಮುಂತಾದ ಖಾಧ್ಯಗಳು ಅನಾವರಣಗೊಂಡವು.
ಇಂದಿರಾ ನಗರದ ಸ್ವಾಮಿ ಸಮರ್ಥ ತಯಾರಿಸಿದ ಕಾಂದಾ ಭಜ್ಜಿ. ಮಹಾಲಕ್ಷ್ಮೀ ಪೂಜೇರಿ ಮತ್ತು ಸುಮನ್ ಪಾಟೀಲ ತಯಾರಿಸಿದ ದಾಭೆಲಿ ಮತ್ತು ಬೆಣ್ಣೆ ದೋಸೆಯನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಬಾಯಿ ಚಪ್ಪರಿಸಿ ಸವಿದರು.
ವಿದ್ಯಾರ್ಥಿ ಸಪ್ಪಲ್ಲ ಪೀರಜಾದೆ ತಯಾರಿಸಿದ ಮಿಲ್ಕಶೇಕ್ ರುಚಿಯಾಗಿತ್ತು.ಸಂಸ್ಥೆಯ ಅಧ್ಯಕ್ಷ ಸಿ.ಬಿ.ಕುಲಕರ್ಣಿ, ಉಪಾಧ್ಯಕ್ಷ ವಿಜಯ ಮಾಂಜ್ರೇಕರ, ನಿರ್ದೇಶಕರಾದ ಅರುಣ ಕುಲಕರ್ಣಿ, ವಿ.ಟಿ.ಶೆಡಬಾಳೆ, ಸಂಜಯ ಅಡಕೆ, ಓಂಕಾರ ಕುಲಕರ್ಣಿ, ಸಂಕೇತ ಮಾಂಜ್ರೇಕರ, ಆಡಳಿತಾಧಿಕಾರಿ ಎಸ್.ಜಿ.ಜಹಾಗೀರದಾರ, ಜಂಟಿ ಕಾರ್ಯದರ್ಶಿ ಮಿಥುನ ದೇಶಪಾಂಡೆ ಮುಂತಾದವರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 