ಬೆಳಗಾವಿ: ಆಧ್ಯಾತ್ಮಿಕ ಶಕ್ತಿಗೂ ಪ್ರಯೋಜನಕಾರಿ: ರಿಚಾ ರಾವ್
ಲೋಕದರ್ಶನ ವರದಿ
ಬೆಳಗಾವಿ 21: ಯೋಗವು ಮನುಷ್ಯನ ಶಾರೀರಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬಹುಮೌಲಿಕ ಪಾತ್ರವಹಿಸುತ್ತದೆ. ಅವನ ಆಧ್ಯಾತ್ಮಿಕ ಶಕ್ತಿಗೂ ಪ್ರಯೋಜನಕಾರಿಯಾಗಿದೆ ಎಂದು ರಿಚಾ ರಾವ್ ನುಡಿದರು. ಅವರು ಲಿಂಗರಾಜ ಮಹಾವಿದ್ಯಾಲಯದಲ್ಲಿ ಯೋಗ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದಿನನಿತ್ಯದ ಬದುಕಿಗೆ ಯೋಗವು ಅಗತ್ಯವಾಗಿ ಬೇಕಾಗಿದೆ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿನಿತ್ಯ ಯೋಗಾಭ್ಯಾಸವನ್ನು ಮಾಡುವುದರಿಂದ ಶರೀರದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ. ವಿದ್ಯಾಥರ್ಿಗಳ ಮಾನಸಿಕ ಏಕಾಗ್ರತೆಗೆ ಯೋಗ ಒಂದು ವರದಾನ. ಜೀವನದ ನಲಿವಿಗೆ ಯೋಗವನ್ನು ಮಾಡಲೇಬೇಕೆಂದು ಕರೆನೀಡಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎಂ.ಪಾಟೀಲ, ಪಪೂ ಪ್ರಾಚಾರ್ಯ ಸುಮಿತ್ರಾ ಚೋಬಾರಿ, 26 ಕನರ್ಾಟಕ ಎನ್ಸಿಸಿ ಬಟಾಲಿಯನ್ ಕಮಾಡಿಂಗ್ ಆಫೀಸರ್ ಕರ್ನಲ್ ಮನೋಜಕುಮಾರ, ಕ್ಯಾಫ್ಟನ್ ಮಹೇಶ ಗುರನಗೌಡರ, ಚೀಫ್ಆಫೀಸರ್ ದೇವಋಷಿ, ಸುಬೇದಾರ ಮೇಜರ್ ಚಂಗಪ್ಪಾ ಪಾಟೀಲ, ಸಿ.ರಾಮರಾವ್, ಲಿಂಗರಾಜ, ಬಿಕೆ ಕಾಲೇಜು, ಜಿಎ ಹೈಸ್ಕೂಲಿನ ಎನ್ಸಿಸಿ ಘಟಕದ ನೂರಾರು ಕೆಡೆಟ್ಗಳು ಯೋಗದಲ್ಲಿ ಪಾಲ್ಗೊಂಡಿದ್ದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 