ಬೆಳಿಗ್ಗೆ ಉದ್ಘಾಟನೆಗೊಂಡ ಸೋಮಯ್ಯ ಕಾರ್ಖಾನೆಗೆ ಬರುತ್ತಿರುವ ಗಾಡಿಗೆ ಸಂಜೆ ಬೆಂಕಿ
A vehicle coming to the Somaiya factory, which was inaugurated in the morning, caught fire in the e
ಮಹಾಲಿಂಗಪುರ 13: ಬೆಳಿಗ್ಗೆ ತಾನೆ ಪೂಜೆ ಮಾಡಿ ಪ್ರಾರಂಭಿಸಿದ ಸೋಮಯ್ಯ ಸಕ್ಕರೆ ಕಾರ್ಖಾನೆಗೆ ಸಂಜೆ 4 ಗಂ.ವೇಳೆ ಏಕಾಏಕಿ ಮುಧೋಳ ಭಾಗದ ರೈತರು ಬಂದು ಅಲ್ಲಿರುವ ಟ್ರ್ಯಾಕ್ಟರಗಳನ್ನು ಕೆಡವಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಒಟ್ಟು 20 ಕ್ಕಿಂತ ಹೆಚ್ಚು ಕಬ್ಬು ತುಂಬಿದ ಟ್ರ್ಯಾಕ್ಟರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯೆಕ್ತಪಡಿಸಿದ ರೈತರು.
ಮುಧೋಳದ ಸುಮಾರು ಸಾವೀರಾರು ರೈತರು ಬಸ್ ತುಂಬಿಕೊಂಡು ಸಮೀರವಾಡಿಗೆ ಬಂದು ಅಲ್ಲಿ ರಸ್ತೆ ಮುಖಾಂತರ ಸೋಮಯ್ಯ ಕಾರ್ಖಾನೆಗೆ ತೆರಳುತ್ತಿದ್ದ ಟ್ರ್ಯಾಕ್ಟರಗಳನ್ನು ಉರುಳಿಸಿ ಪೇಟ್ರೋಲ್ ಸುರಿದು ಬೆಂಕಿ ಹಚ್ಚಿ ಕೂಗಾಡ ತೊಡಗಿದರು.ಅಲ್ಲಿಗೆ ಬಂದ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಲ್ಲದೆ ಸೋಮಯ್ಯ ಸಕ್ಕರೆ ಕಾರ್ಖಾನೆಯ ಮುಂದಿನ ದೊಡ್ಡದಾದ ಗೇಟ ಮುಚ್ಚಿ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಪ್ರತಿಭಟನೆಯಲ್ಲಿ ಸಾಕಷ್ಟು ರೈತರಿಗೂ ಸಹ ಗಾಯಗಾಳಾಗಿವೆ, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಸರ್ಕಾರಿ ಕಾರ್ಖಾನೆ ಆವರಣವೆಲ್ಲ ಉದ್ವಿಘ್ನ ವಾತಾವರಣದಿಂದ ತುಂಬಿ ಸಾರ್ವಜನಿಕರು ಹೊರಗೆ ಬರದಹಾಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಧಾವಿಸಿದ ಎಸ್.ಪಿ ಮತ್ತು ಪೊಲೀಸ ಇಲಾಖೆ ಹಾಗೂ ಅಧಿಕಾರಿಗಳು, ಮತ್ತು ಅಗ್ನಿ ಶಾಮಕ ದಳ, ಅಂಬುಲೇನ್ಸಗಳು ಆಗಮಿಸಿ ಸೂಕ್ತ ಭದ್ರತೆ ನೀಡಲು ಪರದಾಡಬೇಕಾಯಿತು.
ರೈತರ ಬೇಡಿಕೆ: ಯಾವುದೇ ಕಾರಣಕ್ಕೂ ನಾವು ಸರ್ಕಾರ ಹೇಳಿದ ರೇಟ್ಗೆ ಒಪ್ಪುವುದಿಲ್ಲ. ನಮಗೆ ನ್ಯಾಯಯುತವಾದ 3500 ರೂಗಳೆ ಬೇಕು ಇದಕ್ಕೆ ಒಪ್ಪಿದರೆ ಮಾತ್ರ ಕಾರ್ಖಾನೆ ತೆಗೆಯಬೇಕು, ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಕಾರ್ಖಾನೆ ತೆಗೆಯಲು ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 