ಕನಕಾಂಬರ ಹೂವಿನ ಅಲಂಕಾರದ ಬಂಡಿ ಎಳೆವ ವಿಶಿಷ್ಟ ಮಾರ್ಕೆಪುನವ್ ಜಾತ್ರೆ
A unique Markepunav fair where a cart decorated with Kanakambar flowers is pulled
ಕಾರವಾರ 02: ಕರ್ನಾಟಕ -ಗೋವಾ ರಾಜ್ಯಗಳ ಗಡಿ ಗ್ರಾಮ ಮಾಜಾಳಿಯಲ್ಲಿ ವಿಶಿಷ್ಟ ಸಂಪ್ರದಾಯದ ಮಾರ್ಕೆ ಪುನವ್ ಜಾತ್ರೆಯು ಸೋಮವಾರ ಅದ್ಧೂರಿಯಾಗಿ ಜರುಗಿತು. ಗ್ರಾಮದ ಜನರು ಜಾತ್ರೆಯ ಸಂಭ್ರಮ ಸಡಗರದಲ್ಲಿ ಭಾಗಿಯಾಗಿದ್ದರು. ಮಾರ್ಕೆ ಪುನವ್ ಎಂದು ಕರೆಯುವ ಈ ಜಾತ್ರೆ ’ಭಾರತ ಹುಣ್ಣೆಮೆ’ಯ ದಿನ ನಡೆಯುತ್ತಾ ಬಂದಿದೆ. ಕನಕಾಂಬರ್ ಹೂವಿಂದ ಅಲಂಕರಿಸಿ ,ದೇವಿ ದೇವಸ್ಥಾನದ ತನಕ ಬಂಡೆ ಎಳೆಯುವುದು ಈ ಜಾತ್ರೆಯ ವಿಶೇಷ. ಈ ಜಾತ್ರೆಯಲ್ಲಿ ಸಂಪ್ರದಾಯಗಳು ಚಾಚು ತಪ್ಪದೆ ಕುಳಾವಿಗಳು ನಡೆಸುತ್ತಾರೆ . ಕಾರವಾರ -ಗೋವಾ ಗಡಿ ಭಾಗದ ಮಾಜಾಳಿ ಗ್ರಾಮದಲ್ಲಿ ನಡೆದ ದಾಡ ದೇವರು ಮತ್ತು ದೇವತಿ ದೇವರ ಮಾರ್ಕೆ ಪುನವ್ ಜಾತ್ರೆಯಲ್ಲಿ ಮದುವೆ ಮುಂಚಿತವಾಗಿ ಸಮುದಾಯದ 16 ತುಂಬದ ಗಂಡು ಮಕ್ಕಳ ಹೊಟ್ಟೆಯ ಚರ್ಮಕ್ಕೆ ಸೂಜಿ ದಾರ ಪೋಣಿಸುವ ಸಂಪ್ರದಾಯ, ಮದುವೆಯಾಗದ ಕುವರಿಯರು ಕುಲ ದೇವರಿಗೆ ದೀಪದ ಕಳಸ ( ದೀಪ ಹಚ್ಚಿದ ದೀವಜ್ ) ಹಿಡಿದು ದೇವತಿ ದೇವಸ್ಥಾನ ತನಕ ನಡೆದು ಬರುವ ಹರಕೆ ತೀರಿಸಿದರು . ಭರತ ಹುಣ್ಣಿಮೆಯಂದು ನಡೆದ ಜಾತ್ರೆ ಅದ್ಧೂರಿಯಾಗಿ ನಡೆಯಿತು.ಕಾರವಾರ ಮೂಲದವರು ಗೋವಾ, ಮಹಾರಾಷ್ಟ್ರ ರಾಜ್ಯ ಸೇರಿದಂತೆ ವಿವಿಧ ಕಡೆ ನೆಲಸಿದ ದೇವರ ಭಕ್ತರು ಜಾತ್ರೆಗೆ ಆಗಮಿಸಿ, ಹರಕೆ ತೀರಿಸಿದರು. ಬಂಡಿ ಎಳೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 