ಮನೆಗೊಂದು ಗ್ರಂಥಾಲಯ ಉದ್ಘಾಟನಾ ಸಮಾರಂಭ

ಮನೆಗೊಂದು ಗ್ರಂಥಾಲಯ ಉದ್ಘಾಟನಾ ಸಮಾರಂಭ A library opening ceremony at home

ಹುಬ್ಬಳ್ಳಿ 01 : ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಎಂಬ ಹೊಸ ಯೋಜನೆ ಅಡಿಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಲಿಂಗರಾಜ ನಗರದ ಎಂ. ಎಸ್‌. ನೇಗಿನಾಳ ಅವರ ಮನೆಯ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರಿಗೆ ವಿಶ್ವಗುರು  ಬಸವೇಶ್ವರರ ಗ್ರಂಥ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯದ ವಿಧಾನ ಪರಿಷತ್ತಿನ ಮಾಜಿ ಸದಸ್ಯ, ಖ್ಯಾತ ನ್ಯಾಯವಾದಿ  ಮೋಹನ್ ಲಿಂಬಿಕಾಯಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ,  ಕಲಘಟಗಿಯ ಗುಡ್ ನ್ಯೂಸ್ ಕಾಲೇಜಿನ     ಪ್ರಾಚಾರ್ಯ ಡಾ. ಮಹೇಶ್ ಡಿ. ಹೊರಕೇರಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಉತ್ತಮ  ಮನೆಯ  ಗ್ರಂಥಾಲಯ ಸ್ಥಾಪಿಸಿರುವ ಎಂ.ಎಸ್‌. ನೇಗಿನಾಳ ಕುಟುಂಬದವರು, ಪ್ರೊಬಸ್ ಕ್ಲಬ್‌ನ ಅಧ್ಯಕ್ಷ  ಡಾ.ಎಂ.ಜಿ ಸಜ್ಜನರ, ಗ್ರಂಥಪಾಲಕ ಡಾ. ಕೃಷ್ಣ ಮರಡ್ಡಿ , ಮಹಾಂತಪ್ಪ ನಂದೂರ, ಡಾ ಲಿಂಗರಾಜ ರಾಮಾಪೂರ , ಚನ್ನಬಸಪ್ಪ ಧಾರವಾಡ ಶೆಟ್ಟರ್, ಮುಂತಾದವರು ಉಪಸ್ಥಿತರಿದ್ದರು.