ಗೌರವಾರ್ಥ ಸಂತಾಪ ಸೂಚಕ ಸಭೆ
ಹಂಪಿ 06 : ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ನ ಮಾಜಿ ಸದಸ್ಯರಾದ ಹಾಗೂ ಸಾಹಿತಿಯು ಆದ ನಾ. ಡಿಸೋಜ ಅವರ ನಿಧನಕ್ಕೆ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ ಡಾ.ಡಿ.ವಿ. ಪರಮಶಿವಮೂರ್ತಿ ಅವರು ಪುಷ್ಪನಮನ ಸಲ್ಲಿಸಿದರು. ನಂತರ ಅವರ ಆತ್ಮಕ್ಕೆ ಶಾಂತಿಕೋರಿ ನಡೆಸಿದ ಸಂತಾಪ ಸಭೆಯಲ್ಲಿ ಕುಲಪತಿಯವರು, ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಮೇಲ್ಕಂಡ ಸಂತಾಪ ಸುದ್ದಿಯನ್ನು ತಮ್ಮ ಎಲ್ಲ ದಿನಪತ್ರಿಕೆಗಳಲ್ಲಿ ಛಾಯಾಚಿತ್ರದೊಂದಿಗೆ ಪ್ರಕಟಿಸಲು ಕೋರಿದೆ.