ಸಿಎಂಗಾಗಿ 7 ಗಂಟೆ ಕಾದ ಜನ 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ
ರಾಮನಗರ 16: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಕೇವಲ 10 ನಿಮಿಷದಲ್ಲಿ ಅವರ ಅಹವಾಲು ಆಲಿಸಿ ಹೊರಟು ಹೋದರು.
ಸೋಮವಾರ ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಇಂದು ಬೆಳಗ್ಗೆ 9ಕ್ಕೆ ಜನತಾ ದರ್ಶನಕ್ಕೆ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದರು. ಆದರೆ, ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಸಿಎಂ ಮೊದಲೇ ನಿಗದಿಯಾಗಿದ್ದ ಅಧಿಕಾರಿಗಳ ಸಭೆಗೆ ತೆರಳಿದರು. ಸಭೆ ಬಳಿಕ ಊಟಕ್ಕೆ ತೆರಳಿದ ಸಿಎಂ ಜನತಾ ದರ್ಧನ ನಡೆಸಿದ್ದು ಮಧ್ಯಾಹ್ನ 4.40ಕ್ಕೆ.
ಸಿಎಂಗಾಗಿ ಕಾಯುತ್ತಿದ್ದ ದಿವ್ಯಾಂಗರು, ವೃದ್ಧರಿಗೆ ಊಟ, ಕುಳಿತುಕೊಳ್ಳುವ ಆಸನವಿಲ್ಲದೆ ಪರದಾಟ ನಡೆಸಿದರು. ಅಹವಾಲು ನೀಡಲು ಜಿ.ಪಂ. ಕಚೇರಿ ಆವರಣದಲ್ಲಿ ಪರದಾಡುತ್ತಿದ್ದರು. ಕೊನೆಗೆ 4.40ಕ್ಕೆ ಆಗಮಿಸಿದ ಸಿಎಂ 10 ನಿಮಿಷದಲ್ಲಿ ಜನತಾ ದರ್ಶನ ಮುಗಿಸಿ ಮತ್ತೊಂದು ಸಭೆಗೆ ತೆರಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 