ಸಿಎಂಗಾಗಿ 7 ಗಂಟೆ ಕಾದ ಜನ 10 ನಿಮಿಷದಲ್ಲಿ ಜನತಾ ದರ್ಶನ ಮುಕ್ತಾಯ
ರಾಮನಗರ 16: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮನ್ನು ಆಯ್ಕೆ ಮಾಡಿದ ತವರು ಜಿಲ್ಲೆಯ ಜನತೆಯನ್ನು ಸುಮಾರು ಏಳು ಗಂಟೆಗಳ ಕಾಲ ಕಾಯಿಸಿ, ಕೇವಲ 10 ನಿಮಿಷದಲ್ಲಿ ಅವರ ಅಹವಾಲು ಆಲಿಸಿ ಹೊರಟು ಹೋದರು.
ಸೋಮವಾರ ರಾಮನಗರ ಜಿಲ್ಲೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು, ಇಂದು ಬೆಳಗ್ಗೆ 9ಕ್ಕೆ ಜನತಾ ದರ್ಶನಕ್ಕೆ ನಿಗದಿಯಾಗಿತ್ತು. ಇದಕ್ಕಾಗಿ ಜಿಲ್ಲೆಯ ವಿವಿಧ ಮೂಲೆಗಳಿಂದ ಜನರು ಆಗಮಿಸಿದ್ದರು. ಆದರೆ, ತಡವಾಗಿ ಕ್ಷೇತ್ರಕ್ಕೆ ಆಗಮಿಸಿದ ಸಿಎಂ ಮೊದಲೇ ನಿಗದಿಯಾಗಿದ್ದ ಅಧಿಕಾರಿಗಳ ಸಭೆಗೆ ತೆರಳಿದರು. ಸಭೆ ಬಳಿಕ ಊಟಕ್ಕೆ ತೆರಳಿದ ಸಿಎಂ ಜನತಾ ದರ್ಧನ ನಡೆಸಿದ್ದು ಮಧ್ಯಾಹ್ನ 4.40ಕ್ಕೆ.
ಸಿಎಂಗಾಗಿ ಕಾಯುತ್ತಿದ್ದ ದಿವ್ಯಾಂಗರು, ವೃದ್ಧರಿಗೆ ಊಟ, ಕುಳಿತುಕೊಳ್ಳುವ ಆಸನವಿಲ್ಲದೆ ಪರದಾಟ ನಡೆಸಿದರು. ಅಹವಾಲು ನೀಡಲು ಜಿ.ಪಂ. ಕಚೇರಿ ಆವರಣದಲ್ಲಿ ಪರದಾಡುತ್ತಿದ್ದರು. ಕೊನೆಗೆ 4.40ಕ್ಕೆ ಆಗಮಿಸಿದ ಸಿಎಂ 10 ನಿಮಿಷದಲ್ಲಿ ಜನತಾ ದರ್ಶನ ಮುಗಿಸಿ ಮತ್ತೊಂದು ಸಭೆಗೆ ತೆರಳಿದರು.
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ 