ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವ
70th Year Jatra Mahotsav of Kalmeshwar Temples
ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವ
ಬ್ಯಾಡಗಿ 07 : ಸಾಮೂಹಿಕ ವಿವಾಹ ಮಾಡಿಕೊಳ್ಳುವದರಿಂದ ಅನಗತ್ಯ ಸಾಲ ಮಾಡುವದು ತಪ್ಪುತ್ತದೆ ಎಂದು ಪಟ್ಟಣದ ಪಾಠಶಾಲೆಯ ಚನ್ನಬಸಯ್ಯ ಶಾಸ್ತ್ರೀಗಳು ಹೇಳಿದರು. ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ 7 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯವರು ಉಚಿತ ಸಾಮೂಹಿಕ ವಿವಾಹ ಏರಿ್ಡಸುತ್ತ ಬಂದಿದ್ದಾರೆ ಎಂದರು. ವೀರಯ್ಯ್ ಶಾಸ್ತ್ರೀಗಳು ಮಾತನಾಡಿ ದಂಪತಿಗಳಲ್ಲಿ ನಂಬಿಕೆ ವಿಶ್ವಾಸ ಹಾಗೂ ಪ್ರೀತಿ ಇದ್ದರೆ ಜೀವನ ಸುಖಮಯ ಆಗುತ್ತದೆ ಎಂದರು. ವರರು ವರದಕ್ಷಿಣೆ ಅಸೆ ಮಾಡದೇ ದುಡಿದು ಹಣ ಗಳಿಸಿ ಕುಟುಂಬದಲ್ಲಿ ಸಂತೋಷ ತರಬೇಕೆ ಹೊರತು ದುಷ್ಟ ಚಟಗಳಿಗೆ ಬಲಿಯಾಗಬಾರದು ಎಂದರು. ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚಗೊಂಡರ. ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ. ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ. ಖಜಾಂಚಿ ಶೆಂಬಣ್ಣ ಅಂಗಡಿ. ಸದಸ್ಯರಾದ ಶಿವಣ್ಣ ಶೆಟ್ಟರ. ಶಿವಣ್ಣ ಬಣಕಾರ ಹಾಗೂ ಇತರರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 