ಟರ್ಕಿಯಿಂದ ಮಂಗಳೂರಿಗೆ ಬಂತು 50 ಟನ್ ಈರುಳ್ಳಿ
onions
ಮಂಗಳೂರು, ಡಿಸೆಂಬರ್ 4 - ಈರುಳ್ಳಿ ಈಗ ಗ್ರಾಹಕ ಮತ್ತು ಬೆಳೆಗಾರ ಇಬ್ಬರಲ್ಲೂ ಕಣ್ಣೀರು ಹರಿಸುತ್ತಿದೆ ಬೆಲೆ ಕೇಳಿದರೆ ತಲೆ ಚಕ್ಕರ್ ಹೊಡೆದಂತಾಗುತ್ತಿದೆ ಏನೂ ಮಾಡಿದರೂ ಬೆಲೆ ಮಾತ್ರ ಕಡಿಮೆಯಾಗುತ್ತಿಲ್ಲ, ಮಧ್ಯವರ್ತಿಗಳ ದುರಾಸೆಯೂ ಕೊನೆಯಾಗುತ್ತಿಲ್ಲ .!
ಬೆಳೆ ಕಳೆದುಕೊಂಡ ರೈತರು ಮಾಡಿದ ಸಾಲ ತೀರಿಸುವುದು ಹೇಗಪ್ಪ ಎಂದು ತಲಮೇಲೆ ಕೈಹೊತ್ತು ಕುಳಿತರೆ ದುಬಾರಿ ಬೆಲೆಯಲ್ಲಿ ಈರುಳ್ಳಿ ಕೊಳ್ಳುವುದು ಹೇಗೆ ಎಂಬ ಚಿಂತೆ ಗ್ರಾಹಕರನ್ನೂ ಕಾಡುತ್ತಿದೆ.
ಈಜಿಪ್ಟ್ ನಂತರ ಟರ್ಕಿ ಮಂಗಳೂರಿಗೆ 50 ಟನ್ ಈರುಳ್ಳಿ ಹಡಗಿನ ಮೂಲಕ ಪೂರೈಕೆಯಾಗಿ ಹಳೆಯ ಬಂದರಿಗೆ ಆಗಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದಾರೂ ಸಹ , ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿಲ್ಲ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಲೇ ಇದೆ ಎಂದು ಮಂಗಳೂರು ಸೆಂಟ್ರಲ್ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಕೆಜಿಗೆ 120 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ ಇತರೆ ನಗರಗಳಲ್ಲಿ ಇದು 150 ಗಡಿದಾಟುವ ಅಪಾಯವೂ ಎದುರಾಗಿದೆ.
ವ್ಯಾಪಾರಿಗಳ ಪ್ರಕಾರ, ಮಧ್ಯವರ್ತಿಗಳು ಈರುಳ್ಳಿಯ ಬೆಲೆಯನ್ನು ನಿಗದಿಪಡಿಸಿದ್ದು ಇವರ ಚಟುವಟಿಕೆ ಹುನ್ನಾರ, ತಂತ್ರ ಕೊನೆಗಾಣಿಸಲು ಮೊದಲು ಕ್ರಮಜರುಗಿಸಬೇಕು ಎಂಬ ಮಾತು ಕೇಳಿ ಬರುತ್ತಿದೆ .
ಹಿಂದೆ, ಪುಣೆ ಮತ್ತು ಹುಬ್ಬಳ್ಳಿಯಿಂದ ತಂದ ಈರುಳ್ಳಿಯ ಬೆಲೆಯನ್ನು ಸಾರಿಗೆ ವೆಚ್ಚದ ಆಧಾರದ ಮೇಲೆ ನಿಗದಿಪಡಿಸಲಾಗುತ್ತಿತ್ತು ಆದರ ಈಗ ಬೆಲೆ ನಿರಂತರವಾಗಿ ಏರುತ್ತಿದೆ ಎಂದು ಪ್ರಧಾನ ಕಾರ್ಯದರ್ಶಿ, ಬಂದರ್ ಶ್ರಮಿಕರ ಸಂಘದ ಬಿ ಕೆ ಇಮ್ತಿಯಾಜ್ ಆತಂಕ ತೋಡಿಕೊಂಡರು.
ಈರುಳ್ಳಿಯ ಬೆಲೆಯನ್ನು ಪರಿಶೀಲಿಸುವಂತೆ ಒತ್ತಾಯಿಸಿ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸುವುದಾಗಿಯೂ ಅವರು ಹೇಳಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 