ಕೊಪ್ಪಳ ಪಿಜಿ ಸೆಂಟರ್ಗೆ 5 ರ್ಯಾಂಕ್ಗಳು
ಕೊಪ್ಪಳ 17: ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನೆಡೆದ ವಿ.ಎಸ್.ಕೆ.ಯು.ಬಿ 7ನೇ ವಾರ್ಷಿಕ್ ಘಟಿಕೋತ್ಸವದಲ್ಲಿ ಕೊಪ್ಪಳ ಪಿಜಿ ಸೆಂಟರ್ಗೆ ಐದು ರ್ಯಾಂಕ್ಗಳು ಸಂದಿವೆ.
ಬಳ್ಳಾರಿ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಎಂಎ ಪತ್ರಿಕೋದ್ಯಮ ವಿಭಾಗಕ್ಕೆ ಐದು ರ್ಯಾಕ್ಗಳು ಬಂದಿದ್ದು, ಅದರಲ್ಲಿ ಕೊಪ್ಪಳ ಪಿಜಿ ಸೆಂಟರ್ ಎಂಎ ಪತ್ರಿಕೋದ್ಯಮ ವಿಭಾಗದ ಮಂಜುನಾಥ ಚಕ್ರಸಾಲಿ ಪ್ರಥಮ ರ್ಯಾಂಕ್ನೊಂದಿಗೆ ಚಿನ್ನದ ಪದಕ ವಿಜೇತರಾಗಿದ್ದಾರೆ. ರಾಘವೇಂದ್ರ ದೇವರಮನಿ 2ನೇರ್ಯಾಂಕ್, ಸಂತೋಷ ಬಣಕಾರ 4ನೇ ರ್ಯಾಂಕ್ ಸೇರಿ ಎಂಎ ಪತ್ರಿಕೋದ್ಯಮ ವಿಭಾಗದಲ್ಲಿ ಕೊಪ್ಪಳ ಪಿ.ಜಿ ಸೆಂಟರ್ಗೆ 3 ರ್ಯಾಂಕ್ ಬಂದಿರುವುದು ವಿಶೇಷವಾಗಿದೆ. ಅಲ್ಲದೆ ಇತಿಹಾಸ ವಿಭಾಗದ ಅಯ್ಯಪ್ಪ 2ನೇ ರ್ಯಾಕ್ ಮತ್ತು ಇಂಗ್ಲೀಷ್ ವಿಭಾಗದ ಮುಭಿನಾ 5ನೇ ರ್ಯಾಂಕ್ ಪಡೆದುಕೊಂಡು ಕೊಪ್ಪಳ ಪಿಜಿ ಸೆಂಟರ್ಗೆ ಕೀತರ್ಿ ತಂದ್ದಿದಾರೆ. ಅಲ್ಲದೇ ಒಟ್ಟು ಐದು ರ್ಯಾಂಕ್ಗಳು ಲಭಿಸಿದ್ದು ಮೆಚ್ಚುಗೆಯ ವಿಷಯವಾಗಿದೆ. ಕೊಪ್ಪಳ ಸ್ನಾತಕೋತ್ತರ ಕೇಂದ್ರ ವಿಶೇಷಾಧಿಕಾರಿ ಮನೋಜ ಡೊಳ್ಳಿ ಹಾಗೂ ಸಿಬ್ಬಂದಿವರ್ಗದವರು ಎಲ್ಲಾ ವಿದ್ಯಾಥರ್ಿಗಳಿಗೆ ಅಭಿನಂಧಿಸಿದ್ದಾರೆ
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್ 