ಕಾಗವಾಡ: ಮುನಿನಿವಾಸ್ ಕಟ್ಟಿಸಲು 2 ಲಕ್ಷ ರೂ. ಚೆಕ್ ವಿತರಣೆ
ಲೋಕದರ್ಶನ ವರದಿ
ಕಾಗವಾಡ 12: ಧರ್ಮಸ್ಥಳದ ಡಾ. ವಿರೇಂದ್ರಜಿ ಹೆಗ್ಡೆ ಇವರ ನೇತೃತ್ವದಲ್ಲಿ ಸ್ಥಾಪಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಉಗಾರ ಬುದ್ರುಕ ಗ್ರಾಮದ 1008 ಭಗವಾನ್ ಮಹಾವೀರ ಜೈನ್ ಮಂದಿರದಲ್ಲಿ ಮುನಿನಿವಾಸ್ ಕಟ್ಟಿಸಲು 2 ಲಕ್ಷ ರೂ. ದಾನವಾಗಿ ನೀಡಿದರು.
ಮಂಗಳವಾರ ರಂದು ಉಗಾರ ಬುದ್ರುಕ ಗ್ರಾಮದ ಭಗವಾನ್ ಮಹಾವೀರ ದಿಗಂಬರ ಜೈನ್ ಮಂದಿರದಲ್ಲಿ ಚೇಕ್ ವಿತರಣೆ ಕಾರ್ಯಕ್ರಮ ನೆರವೇರಿತು.
ಸಮಾರಂಭದ ಆಧ್ಯಕ್ಷತೆ ವಹಿಸಿದ ಉಗಾರ ಪಿಕೆಪಿಎಸ್ ಸಂಘದ ಆಧ್ಯಕ್ಷ ಶೀತಲ ಪಾಟೀಲ ಮಾತನಾಡಿ, ನಡೆದಾಡುವ ದೇವರಾದ ವಿರೇಂದ್ರಜಿ ಹೆಗ್ಡೆ ಇವರು ಇಡಿ ರಾಜ್ಯದಲ್ಲಿ ಸರ್ವಧರ್ಮದ ಅಭಿವೃದ್ಧಿಗಾಗಿ ಮಾಡಿದ ಕಾರ್ಯ ಇಡಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡದ ಪ್ರಾದೇಶಿಕ ನಿದರ್ೇಶಕರಾದ ದುಗ್ಗೆಗೌಡರ ಇವರು ಮಂದಿರದ ಆಧ್ಯಕ್ಷ ದೇವಗೌಡಾ ಪಾಟೀಲ ಇವರಿಗೆ 2 ಲಕ್ಷ ರೂ. ಗಳ ಚೇಕ್ ನೀಡಿದರು.
ಸಮಾರಂಭದಲ್ಲಿ ಧರ್ಮಸ್ಥಳದ ಜಿಲ್ಲಾ ನಿದರ್ೇಶಕ ಎಂ.ಶೇನಪ್ಪಾ, ಅಥಣಿ ತಾಲೂಕಾ ಯೋಜನಾಧಿಕಾರಿ ರಾಜು ನಾಯಿಕ, ಸತೀಶ ಸುವಣರ್ಾ, ಪಕರೇಶ ಇಂಗಳೆ, ಉಗಾರದ ಪುಷ್ಪಾ ಅಲತಗೆ, ಸೇರಿದಂತೆ ಸಮಾಜದ ಅನೇಕ ಮುಖಂಡರು ಪಾಲ್ಗೊಂಡಿದ್ದರು.
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು 