ಗೋಕಾಕ: 'ಸಂಘ-ಸಂಸ್ಥೆಗಳ ಪ್ರಗತಿಗೆ ಸ್ಥಳೀಯರ ಸಹಕಾರ ಅವಶ್ಯ'
ಲೋಕದರ್ಶನ ವರದಿ
ಗೋಕಾಕ 17: ಗ್ರಾಮೀಣ ವಲಯದಲ್ಲಿ ಸಹಕಾರಿ ಸಂಘ-ಸಂಸ್ಥೆಗಳ ಪ್ರಗತಿಗೆ ಸ್ಥಳೀಯರ ಸಹಕಾರ ಅವಶ್ಯಕವಾಗಿದೆ ಎಂದು ಕಟಕೋಳದ ಅಭಿನವ ಸಿದ್ರಾಯಜ್ಜನವರು ಹೇಳಿದರು.
ಗ್ರಾಮದ ಕುರಬೇಟ ಅವರ ಕಟ್ಟಡದಲ್ಲಿ ಸೋಮವಾರ ಡಿ.16ರಂದು ನಡೆದ ಕಟಕೋಳ ಸಿದ್ರಾಯಜ್ಜನವರ ಸೌಹಾರ್ದ ಸಹಕಾರಿಯ ನೂತನ ಶಾಖೆಯ ಉದ್ಘಾಟನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಸಹಕಾರಿ ಸಂಘ-ಸಂಸ್ಥೆಗಳು ಹಳ್ಳಿಯ ಜನರ ಜೀವಾಳವಾಗಿವೆ ಎಂದರು.
ಸುಣಧೋಳಿ ಅಭಿನವ ಶಿವಾನಂದ ಸ್ವಾಮಿಜಿ ಅವರು ಮಹಾಲಕ್ಷೀ ಮತ್ತು ಸರಸ್ವತಿ ಮಹಾಪೂಜೆ ನೆರವೇರಿಸಿದರು. ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜಿ, ಯರಗಟ್ಟಿ ಗಣಪತಿ ಮಹಾರಾಜರು, ತಪಸಿ ಸುರೇಶ ಮಹಾರಾಜರು, ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ, ಹನುಮಂತ ವಡೇರ ಸಮಾರಂಭದ ಸಮ್ಮುಖ ವಹಿಸಿದ್ದರು.
ಇಲ್ಲಿಯ ನೂತನ ಶಾಖೆಯಲ್ಲಿ ಠೇವಣಿ, ಎಸ್ಬಿ ಖಾತೆದಾರ ಗ್ರಾಹಕರಿಗೆ ಪ್ರಮಾಣ ಪತ್ರ, ಪಾಸ್ ಬುಕ್ಕ್ ವಿತರಿಸಲಾಯಿತು. ಹರಗುರು ಚರಮೂತರ್ಿ, ಗಣ್ಯರನ್ನು ಈ ವೇಳೆ ಸಹಕಾರಿಯ ವತಿಯಿಂದ ಸತ್ಕರಿಸಲಾಯಿತು.
ಬಸವರಾಜ ಕುರಬೇಟ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಮಾಜಿ ಅಧ್ಯಕ್ಷ ಲಕ್ಷ್ಮಣ ಚಂದರಗಿ, ಲಕ್ಷ್ಮಣ ಸೋಮಗೌಡ್ರ, ವೀರಭದ್ರ ನೀಲಣ್ಣವರ, ಚಂದ್ರಶೇಖರ ಹೂಗಾರ, ಮಹಾದೇವ ಹೊರಟ್ಟಿ, ಸುರೇಶ ವಡೇರ, ವಿರುಪಾಕ್ಷಯ್ಯ ಮಠಪತಿ, ವಿಠಲ ಕೋಣಿ, ರಮೇಶ ಹಾಲಣ್ಣವರ, ಸುರೇಶ ಮಠದ, ಪ್ರಧಾನ ಕಛೇರಿ ವ್ಯವಸ್ಥಾಪಕ ಚಿದಂಬರ ಕದಮ, ಶಾಖೆಯ ಮುಖ್ಯ ಕಾರ್ಯನಿವರ್ಾಹಕ ಸಂಭಾಜಿ ಕದಮ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಗಣ್ಯರು, ಶರಣರು, ಯರಗಟ್ಟಿ ಪ್ರಧಾನ ಕಛೇರಿಯ ಆಡಳಿತ ಮಂಡಳಿ ಅಧ್ಯಕ್ಷ, ಸದಸ್ಯರು, ಪದಾಧಿಕಾರಿಗಳು, ಶಾಖೆಯ ಸಲಹಾ ಸಮಿತಿ ಸದಸ್ಯರು, ಗ್ರಾಮಸ್ಥರು, ಇತರರು ಇದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 