“ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮ-2026-27”

“ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮ-2026-27” “Cultural and Drama Program-2026-27”

ಲೋಕದರ್ಶನ ವರದಿ

          ಎಮ್‌. ಚಂದರಗಿ 31:  ದಿನಾಂಕಃ 28-03-2025 ರಂದು ಸಂಜೆ 06 ಗಂಟೆಗೆ ಶ್ರೀ ಸ್ವಾಮಿ ವಿವೇಕಾನಂದ ಯುವ ಸಾಹಿತ್ಯ ಸಾಂಸ್ಕೃತಿಕ ಸಂಘ, ಯರಗಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಸಂಯುಕ್ತಾಶ್ರಯದಲ್ಲಿ ಎಮ್‌. ಚಂದರಗಿ ಗ್ರಾಮದಲ್ಲಿ “ಸಾಂಸ್ಕೃತಿಕ ಹಾಗೂ ನಾಟಕ ಕಾರ್ಯಕ್ರಮ-2026-27” ವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಯಿತು.  

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಸಪ್ಪ ರಾಮಪ್ಪ ಅಕ್ಕಿಸಾಗರ, ಜಾನಪದ ಕಲಾವಿದರು, ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಮೇಶ ಮೊಶೆಪ್ಪ ವೆಂಕಟಾಪೂರ ಇವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ರಮೇಶ ಬಸಪ್ಪ ಕತ್ತಿ, ಸಂತೋಷ ಅವಜಪ್ಪಗೋಳ, ಯಮನವ್ವ ಜೋಕಾನಟ್ಟಿ, ರುದ್ರ​‍್ಪ ಮಾದರ, ಶಾಂತವ್ವ ದ್ಯಾಮಪ್ಪ ನಾಗನ್ನವರ, ಶ್ರೀಕಾಂತ ದುಂಡಯ್ಯಾ ಹಿರೇಮಠ, ಕೆಂಪಣ್ಣಾ ರಾಮಪ್ಪ ಕತ್ತಿ, ಲಕ್ಷ್ಮಣ ರಾಮಪ್ಪ ಅಕ್ಕಿಸಾಗರ ಇವರು ಭಾಗವಹಿಸಿದ್ದರು. 

ಸಂಸ್ಥೆಯ ಅಧ್ಯಕ್ಷರಾದ ರುದ್ರ​‍್ಪ ಮಾದರ ಇವರು ಮಾತನಾಡಿ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸುವುದರಿಂದ ಹಲವಾರು ಕಲಾವದರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಜೀವನಕ್ಕೂ ಒಂದು ದಾರಿಯಾದಂತೆ ಆಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸಂಗ್ಯಾ-ಬಾಳ್ಯಾ ಸಣ್ಣಾಟ ಹಾಗೂ ಭಜನಾ ಪದಗಳು ಜರುಗಿದವು. ಸ್ವಾಗತವನ್ನು ಯಮನವ್ವ ಜೋಕಾನಟ್ಟಿ ಹಾಗೂ ವಂದಣಾರೆ​‍್ಣಯನ್ನು ಸಂತೋಷ ಅವಜಪ್ಪಗೋಳ ಮಾಡಿದರು.