‘ವಂದೇ ಮಾತರಂ ಕೋಸ್ಟ್ಸಲ್ ಸೈಕ್ಲೋಥಾನ್ -2026- ರಾ​‍್ಯಲಿ

 ‘ವಂದೇ ಮಾತರಂ ಕೋಸ್ಟ್ಸಲ್ ಸೈಕ್ಲೋಥಾನ್ -2026- ರಾ​‍್ಯಲಿ ‘Vande Mataram Coastal Cyclothon -2026- Rally

ಲೋಕದರ್ಶನ ವರದಿ 

ಕಾರವಾರ 17 : ವಂದೇ ಮಾತರಂ ಗೀತೆಯು 150 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ , ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಆಯೋಜಿಸಿದ್ದ ‘ವಂದೇ ಮಾತರಂ ಕೋಸ್ಟ್ಸಲ್ ಸೈಕ್ಲೋಥಾನ್ -2026- ರಾ​‍್ಯಲಿಯ ಪಶ್ಚಿಮ ಕರಾವಳಿ ಸೈಕ್ಲೋಥಾನ್ ತಂಡವು, ಮಂಗಳವಾರ  ಕಾರವಾರದ ಮಾಜಾಳಿಯ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಧ್ವಜಾರೋಹಣ ಸಮಾರಂಭದ ನಂತರ ಮುರುಡೇಶ್ವರದ ಕಡೆಗೆ ಸಾಗಿತು.  

ಈ ಸಂದರ್ಭದಲ್ಲಿ ತರಬೇತಿ ನಿರತ ಐ.ಎ.ಎಸ್ ಅಧಿಕಾರಿ ಝೂಫಿಶಾನ್ ಹಕ್, ಕೈಗಾ ಸ್ಟೇಷನ್ ಡೈರೆಕ್ಟರ್ ಶ್ರೀರಾಮ ಕೆ, ಸಿ.ಐ.ಎಸ್‌.ಎಫ್‌. ಘಟಕ ಎನ್‌.ಪಿ.ಸಿ. ಕೈಗಾದ  ಸೀನಿಯರ್ ಕಮಾಂಡೆಂಟ್ ಅಜಯ್ ಕುಮಾರ್ ಝಾ, ಕೋಸ್ಟ್‌ ಗಾರ್ಡ್‌ ಕಮಾಂಡರ್ ಕಿರಣಕುಮಾರ ಸಿನ್ಹಾ, ಡೆಪ್ಯುಟಿ ಕಮಾಂಡೆಂಟ್ ಬಿರೇಂದ್ರ ಕುಮಾರ್,  ಇಂಜೀನೀಯರ್ ಕಾಲೇಜಿನ  ಪ್ರಾಂಶುಪಾಲ ಡಾ. ಶಾಂತಲಾ, ಡಿಆರ್‌ನ ಡಿವೈಎಸ್‌ಪಿ ರಾಘವೇಂದ್ರ ನಾಯ್ಕ, ಸಿಐಎಸ್‌ಎಫ್‌ನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಎಸ್ ನಗಿ, ಚಂದ್ರು ಮತ್ತಿತರರು ಇದ್ದರು.